ವಚನ ಸಂಗಾತಿ
ಸವಿತಾ ದೇಶಮುಖ್
ಶರಣ ಮನಸಂದ ಮಾರಿತಂದೆ
ಅವರ ವಚನ ವಿಶ್ಲೇಷಣೆ-

ಮನಸಂದ ಮಾರಿತಂದೆ ‘ಶರಣರು 12ನೇ ಶತಮಾನದ ಬಸವ ಭಾನು ಶರಣರ ಪ್ರಮಥರಲ್ಲಿ ಒಬ್ಬರು. ಇವರು ಸರ್ವಜ್ಞನಂತೆ ಖಡಾ ಖಂಡವಾಗಿ ಸಮಾಜದ ಆಗು ಹೋಗುಗಳ ಬಗೆ ವರ್ಣಿಪರು.
ಸಮಾಜದಲ್ಲಿ ನಡೆಯುವ ಅನ್ಯಾಯ ಅನಾಚಾರ ಅವಗುಣಗಳನು ಕಟುವಾಗಿ ಟೀಕಿಸಿದ್ದಾರೆ.ಇವರು ವಚನಗಳು ಚಿಕ್ಕ ಚಿಕ್ಕವು ಆಗಿದ್ದರು ಗಾಢವಾದ ಪ್ರಭಾವವನ್ನು ಬಿರುವಂತಹ ಅನುಭವದ ಅನುಭಾವ ವಚನಗಳಲಿ ಮೂಡಿವೆ. ಇವರ ಜೀವನದ ವಿವರಗಳು ಲಭ್ಯವಾಗಗಿಲ್ಲ.
ಕಾಲ -, ೧೧೬೦
ಅಂಕಿತನಾಮ-“ಮನಸಂಧಿತು ಮಾರೇಶ್ವರಾ”
ವಚನಗಳು-೧೦೧
ಇದಿಷ್ಟು ಮಾಹಿತಿಯನ್ನು ಬಿಟ್ಟರೆ ಬೇರೆ ಯಾವ ಮಾಹಿತಿ ಲಭ್ಯವಾಗಲಿಲ್ಲ. ಇವರ ವಚನಗಳು
ಗುರುಲಿಂಗ ಜಂಗಮದ ವೈಚಾರಿಕತೆಗೆ ಪ್ರಾಧಾನ್ಯತೆ ಕೊಡಲಾಗಿದೆ .
ವಚನ:
“ಅಪ್ಪು ಅಪ್ಪುವ ನುಂಗಿದಂತೆ,
ವಿಚಿತ್ರ ಚಿತ್ರದೊಳಡಗಿದಂತೆ,
ಮನ ಮಹವ ಕೂಡಿ ಬೆಳಗು
ಬೆಳಗನೊಳಕೊಂಡಂತೆ,
ತಾನೆಂಬುದೇನೂ ಕುರುಹುದೋರದೆ,
ಮನಸಂದಿತ್ತು ಮಾರೇಶ್ವರಾ.”
ಪದಾರ್ಥ:
ಮನಸಂದ ಮಾರಿತಂದೆ: ಮನಸ್ಸಿನ ಬಯಕೆಗಳು ತೀರಿಕೊಂಡವು; ಮನಸ್ಸು ಶಾಂತವಾಯಿತು.ಅಪ್ಪು ಅಪ್ಪುವ ನುಂಗಿದಂತೆ: ನೀರು ನೀರನ್ನು ಸೇರಿಸಿಕೊಂಡು ಒಂದಾಗುವಂತೆ; ಪೂರ್ಣ ಸ್ಥಿತಿಗೆ ಬಂದಂತೆ.ವಿಚಿತ್ರ ಚಿತ್ರದೊಳಡಗಿದಂತೆ: ಕಲ್ಪನೆಯ, ವಿಚಿತ್ರ ಚಿತ್ರದಲ್ಲಿ ಬೆರೆತುಹೋಗಿದಂತೆ; ಸಾಂಸಾರಿಕ ಚಿತ್ರದಲ್ಲಿ ತನ್ನ ಸ್ವರೂಪ ಮರೆತಂತೆ.
ಮನ ಮಹವ ಕೂಡಿ ಬೆಳಗು ಬೆಳಗನೊಳಕೊಂಡಂತೆ: ಮನಸ್ಸಿನ ಮಹತ್ವವೂ ಬೆಳಕಿನೊಳಗೆ ಕರಗಿ ಹೋದಂತೆ; ಜ್ಞಾನದಲ್ಲಿ ಲೀನವಾದಂತೆ.ತಾನೆಂಬುದೇನೂ ಕುರುಹುದೋರದೆ: “ನಾನು” ಎಂಬ ಅಹಂಭಾವದ ಗುರುತು ಕೂಡ ಕಾಣಿಸದಂತೆ.ಮನಸಂದಿತ್ತು ಮಾರೇಶ್ವರಾ: ಅಂತಹ ಸ್ಥಿತಿಯಲ್ಲಿ ಮನಸ್ಸು ಮಾರೇಶ್ವರನಲ್ಲಿ (ಈಶ್ವರನಲ್ಲಿ) ಶರಣಾದೀತು.
ವಚನ ವಿಶ್ಲೇಷಣೆ:
ಈ ವಚನದಲ್ಲಿ ಅಹಂಕಾರ ಹೀನ ಭಕ್ತಿಯ ಸ್ಥಿತಿಯನ್ನು ವರ್ಣಿಸಲಾಗಿದೆ. ಭಕ್ತನು ತನ್ನ “ನಾನು” ಎಂಬ ಬುದ್ಧಿಯನ್ನು ಸಂಪೂರ್ಣವಾಗಿ ಬಿಟ್ಟು, ತನ್ನ ಮನಸ್ಸನ್ನು ಪೂರ್ಣವಾಗಿ ಮಾರೇಶ್ವರನಿಗೆ ಅರ್ಪಿಸಿದ ಸ್ಥಿತಿಯನ್ನು ಇಲ್ಲಿ ಚಿತ್ರಿಸಿದ್ದಾರೆ.”ಅಪ್ಪು ಅಪ್ಪುವ ನುಂಗಿದಂತೆ” ಎಂಬ ಉಪಮೆಯಲ್ಲಿ, ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ದೇವರ ಅಸ್ತಿತ್ವದಲ್ಲಿ ಕರಗಿಸಿಕೊಂಡಂತೆ.”ವಿಚಿತ್ರ ಚಿತ್ರದೊಳಡಗಿದಂತೆ” ಎನ್ನುವುದರಿಂದ, ಈ ಜಗತ್ತಿನ ವಿಚಿತ್ರ ರೂಪಗಳ ಮಧ್ಯೆಯೂ ತನ್ನ ಅಸ್ತಿತ್ವವನ್ನೇ ಮರೆತುಹೋಗುವ ಭಾವನೆ ಇದೆ.
“ತಾನೆಂಬುದೇನೂ ಕುರುಹುದೋರದೆ” ಎಂಬುದರಿಂದ, “ನಾನು” ಎನ್ನುವ ಗುರುತು ಕೂಡ ಇಲ್ಲದಂತೆ ಮರೆತು ಬಿಡುವ ಸ್ಥಿತಿ ಉಲ್ಲೇಖವಾಗುತ್ತದೆ.ಅಂತಿಮವಾಗಿ, ಈ ಎಲ್ಲಾ ಸ್ಥಿತಿಗಳ ಮೊತ್ತವಾದರೂ ಮನಸ್ಸು ಶುದ್ಧವಾದ ಶರಣಾಗತಿಯನ್ನೂ ದಿವ್ಯತೆಯನ್ನೂ ಸಾಧಿಸುತ್ತದೆ.
ಒಟ್ಟಾರೆ ಭಾವ ಅಂದರೆ…..
“ಭಕ್ತನ ಮನಸ್ಸು ತನ್ನ ಇಚ್ಛೆಗಳನ್ನು, ಅಹಂವನ್ನು, ಬುದ್ಧಿಯ ಬಾಧೆಗಳನ್ನು ಬಿಟ್ಟು ಶುದ್ಧ ಶರಣಾಗಿ ಮಾರೇಶ್ವರನಲ್ಲಿ ಲೀನವಾಗುತ್ತದೆ.ಈ ವಚನವು ಆತ್ಮಸಮರ್ಪಣೆಯ ಪರಮ ಸ್ಥಿತಿಯನ್ನು ಸುಂದರವಾಗಿ ಪಠ್ಯರೂಪದಲ್ಲಿ ಅಭಿವ್ಯಕ್ತಿಸಿದೆ.
ಹೀಗೆ ಗುರುಲಿಂಗ ಜಂಗಮದ ವೈಚಾರಿಕತೆ ಲಿಂಗಾಂಗ ಸಾಮರಸ್ಯದಲಿ ಪಾರಮಾರ್ಥವನ್ನು ಹೊಂದುವ ರೀತಿ, ನೇಮ ಆಚರಣೆಗಳ ಬಧತೆ, ಧರ್ಮ ಭ್ರಷ್ಟತನಕ್ಕೆ ಅನೇಕ ವಿಷಯಗಳನ್ನು ನಿಂದಿಸಿದ್ದಾರೆ
ಅನ್ಯಾಯಗಳ ಕೆಲಸಗಳನ್ನು ಪ್ರತಿ ವಿರೋಧಿಸಿ ಸತ್ಯವನ್ನು ಪ್ರತಿಪಾದಿಸುವ ಸಿದ್ಧಿಯನ್ನು ಪಡೆದುಕೊಂಡಿದ್ದರು. ಒಂದು ಕಡೆ ಗೋ ವಧೆಯನ್ನು ಮಾಡಿ ಇನ್ನೊಂದು ಕಡೆ ಗೋದಾನವ ಮಾಡಿದರೆ ಪಾಪದ ಕರ್ಮವು ಸರದಿತ್ತೇ? ಅಂತ ಒಂದು ವಚನದಲ್ಲಿ ಕೇಳಿದರೆ ಅನಾಚಾರ ಮಾಡಿ ಆಚಾರಕ್ಕೆ ಒಗ್ಗಿದರೆ ಅದು ಪಾಪವನ್ನು ಕಳೆಯಲಾರದು ಅಂತ ಇನ್ನೊಂದು ವಚನದಲ್ಲಿ ಹೇಳಿದರು .
ಹೀಗೆ ಅವರು ಬರೆದ ೧೦೧ ವಚನಗಳಲ್ಲಿ ಬಳಸಿದ ಶಬ್ದಗಳು ಗಾಡವಾದ ಅರ್ಥಗಳನ್ನು , ಸ್ವಚ್ಛಂದವಾಗಿ ಬಹಿರಂಗವಾಗಿ ಎಲ್ಲ ಅನಿಷ್ಟ ಪದ್ಧತಿಗಳನ್ನು ಆಚಾರ ವಿಚಾರಗಳನ್ನು ವಿರೋಧಿಸಿದರು.ಇವರ ವಚನಗಳು ಆಳವಾದ ಭಾವನಾತ್ಮಕ ಅಂಶಗಳಿಂದ ಕೂಡಿದ್ದು ,ಕತ್ತಲೆಯ ಅಂಧಕಾರದ ಸಂಕಷ್ಟ ಮತ್ತು ಹೊರಹೊಮ್ಮುವ ಬೆಳಕಿನ ನಿರೀಕ್ಷೆಗಳ ಮಧ್ಯೆಯೆ ಕವಿ ತನ್ನ ಮನೋಭಾವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸಿದ್ದಾನೆ. ನಿರಾಸೆಯ ತೀವ್ರತೆಯ ಮಧ್ಯೆಯೂ ತಾತ್ವಿಕ ಚಿಂತನೆಯಿಂದ ಉಜ್ವಲವಾದ ಸಾಲುಗಳು ಮನಸ್ಸನ್ನು ಸ್ಪರ್ಶಿಸುತ್ತವೆ. ಬದುಕಿನ ಅನಂತ ಸತ್ಯವನ್ನು ರೂಪಕದ ಮೂಲಕ ವಿವರಿಸುವ ಕವಿ ಓದುಗರನ್ನು ಆಳವಾದ ಭಾವಗರ್ಭದಲ್ಲಿ ಮುಳುಗುವಂತಹ ಅನುಭವಕ್ಕೆ ಕರೆಸುತ್ತಾನೆ.
ಬಸವಣ್ಣನವರ ಕಾಲಘಟ್ಟದಲ್ಲಿ ಇಂಥ ಉಚ್ತಮ ಸತ್ಯಚಾರಿತ್ರಕ ವ್ಯಕ್ತಿತ್ವ ಉಳ್ಳವರು, ಸಾಹಿತ್ಯ ಪರಿಣಿತ ಹೊಂದಿದ , ಸತ್ಕಕಾಯಕನಿಷ್ಠರಾದ ಅಸಂಖ್ಯಾತ ಶರಣರನ್ನು ಒಂದೆಡೆ ಸೇರಿಸಿ ಸಮಾನತೆಯ ಸಮಾಜವನ್ನು ಪೋಷಿಸಿದ್ದ ಬಸವನಿಗೆ ಶರಣು ಶರಣಾರ್ಥಿ .
.ಸವಿತಾ ದೇಶಮುಖ್

ಅದ್ಭುತ ಮೆಡಮ
Thanku