ಗಂಡಸರೇ ಹುಷಾರ್!ಎನಾಗುತ್ತಿದೆ ಈ ಸಮಾಜಕ್ಕೆ??ಮೀನಾಕ್ಷಿ ಸೂಡಿ ಅವರ ಲೇಖನ

ಇತ್ತೀಚೆಗೆ ಸಮಾಜದಲ್ಲಿ ಪುರುಷರಿಗೂ ರಕ್ಷಣೆ ಇಲ್ಲದಂತಾಗಿದೆ.ಅದಕ್ಕೆ ಉದಾಹರಣೆಯಾಗಿನಿವೃತ್ತ IGP ಓಂ ಪ್ರಕಾಶ್ ಅವರು ತಮ್ಮ ಮನೆಯಲ್ಲಿ ಕೊಲೆಗೀಡಾದ ಘಟನೆಯನ್ನು ಉಲ್ಲೇಖಿಸಬಹುದು.ಇಡೀ ದೇಶವನ್ನೇ ಕಣ್ಣೀರ ಕಡಲಲ್ಲೇ ಮುಳುಗಿಸಿದ ಪಹಲ್ಗಾಮ್ ಭಯೋತ್ಪಾದಕರ ದಾಳಿ ಹಾಗೂ ಮುಗ್ಧರ ಮಾರಣ ಹೋಮ..

 ಆತ್ಮೀಯ ಓದುಗರೇ…
 ಈ ತಿಂಗಳಲ್ಲಿ ಇವೆರಡು ಅತ್ಯಂತ ದುಃಖದಾಯಕ ಘಟನೆಗಳು. ಏನು ಕಾರಣವಿಲ್ಲದೆ ಕ್ರೂರ ಮತಾಂಧರ ದಾಳಿಗೆ ಬಲಿಯಾದ ಮುಗ್ಧ ಪ್ರವಾಸಿಗರು,,,,ಗಮನಿಸಿ ಇಲ್ಲಿಯೂ ಗಂಡಸರೇ ಟಾರ್ಗೆಟ್…

 ಅದೇ ರೀತಿ ಕರ್ನಾಟಕ ಜನತೆ ಬೆಚ್ಚಿ ಬೀಳುವಂತಹ ಘಟನೆ ಎಂದರೆ ನಿವೃತ್ತ ಪೋಲಿಸ್ ಅಧಿಕಾರಿಗಳಾದ  
ಓಂ ಪ್ರಕಾಶ್ ಅವರ ಹತ್ಯೆ ಅದು ಅವರ ಪತ್ನಿಯಿಂದಲೇ ಎಂದು ಹೇಳಲಾಗುತ್ತಿದೆ.

●  ಪ್ರತಿನಿತ್ಯ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯವನ್ನು ಕಂಡು ಇಡೀ ಪುರುಷ ಜಾತಿಯನ್ನ ಕೆಟ್ಟವರು, ದುಷ್ಟರು ಎಂದು ಹೇಳಿಬಿಡಬಹುದು ಅದು ನಿಜವೇ…
 ಪುಟ್ಟ ಬಾಲಕಿಯಿಂದ ವೃದ್ಧರಾದಿಯಾಗಿಯೂ ಯಾವ ವಯಸ್ಸಿನ ಹೆಣ್ಣು ಮಕ್ಕಳನ್ನು ಕಾಮಾಂಧರು ಬಿಡುತ್ತಿಲ್ಲ ಅತ್ಯಾಚಾರವಾಗಿ ಕೊಲೆ ಮಾಡುವ ಕ್ರೂರಿಗಳು ಇದ್ದಾರೆ.

ಅದೇ ರೀತಿ ಹೆಣ್ಣು ಮಕ್ಕಳಿಂದ ಅನ್ಯಾಯಕ್ಕೆ ಒಳಗಾಗಿ ಕುಟುಂಬದಿಂದ ದೂರಾಗಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡ
ಪುರುಷರು ಇದ್ದಾರೆ.

ಓಂ ಪ್ರಕಾಶ್ ಅವರ ಹತ್ಯೆಯನ್ನು ಗಮನಿಸಿದಾಗ ಕುಟುಂಬದಲ್ಲಿ ಪುರುಷರಿಗೆ ರಕ್ಷಣೆ ಇಲ್ಲದಾಯಿತೆ?

 ಸಾರ್ವಜನಿಕರಿಗೆ ರಕ್ಷಣೆ ಕೊಡುವ ಇಲಾಖೆಯಲ್ಲಿ ಉನ್ನತ ಹುದ್ದೆಯನ್ನು ನಿಭಾಯಿಸಿದ ಅಧಿಕಾರಿಗೆ ತನ್ನ ಕುಟುಂಬ ನಿಯಂತ್ರಣ ಅಸಾಧ್ಯವಾಯಿತೆ ?

 ಇಂತಹ ಘಟನೆಗಳು ಸಮಾಜಕ್ಕೆ ನೀಡುವ ಸಂದೇಶವಾದರೂ ಏನು?

 ಕ್ರೂರಿ ಗಂಡಸರು ಎನ್ನುವ ನಾವು ಇಂಥದಕ್ಕೆ ಏನು ಹೇಳೋಣ?

 ಕೆಲವು ಹೆಣ್ಣು ಮಕ್ಕಳು ತಮ್ಮ ರಕ್ಷಣೆಗೆಂದು ರೂಪಿಸಿದ ಕಾನೂನುಗಳ ಸಹಾಯ ಪಡೆದು ತಮ್ಮ ಅನುಕೂಲಕ್ಕಾಗಿ ಬಳಸಿಕೊಂಡು ಇಡೀ ಕುಟುಂಬವನ್ನು ಒಡೆದು ಕೊನೆಗೆ ಗಂಡ, ಮನೆ ಮಕ್ಕಳನ್ನು ತೊರೆದು ಸ್ವೇಚ್ಛೆ ಜೀವನ ನಡೆಸುವ ಸ್ತ್ರೀಯರಿಗೆ ಒಳ್ಳೆಯವರು ಅನ್ನೋಣವೇ??

ಓಂ ಪ್ರಕಾಶ್ ಅವರ ಹತ್ಯೆಗೆ
ಕಾರಣಗಳೇನೆ ಇರಲಿ ಹೆಂಗಸರೂ ಕೂಡ ಇಷ್ಟು ಕ್ರೂರವಾಗಿರುತ್ತಾರೆಂಬುದು  ಸಾಬೀತಾಯಿತಲ್ಲವೇ?

 ಓದುಗ ಮಿತ್ರರೇ  
ಗಂಡಸರಿಗೂ ಸೇಫ್ ಅಲ್ಲ ಈ ಸಮಾಜ!!!!
ದೇಹದ ವಾಂಛೆಗೆ ಹೆಣ್ಣು ಮಕ್ಕಳು ಬಲಿಯಾದಂತೆ
 ಆಸ್ತಿ,ಹಣ, ಅಂತಸ್ತಿಗೆ ಪುರುಷರು ಬಲಿಯಾಗುತ್ತಿದ್ದಾರ????

 ಒಂದು ವರದಿಯ ಪ್ರಕಾರ ಇದು ನಿಜವೆನಿಸುತ್ತಿದೆ.
ಉದಾಹರಣೆಗೆ ನೋಡಿ
ನಾವು ಇತ್ತೀಚಿಗೆ ನೋಡಿದ ಕೆಲವು ಘಟನೆಗಳನ್ನು ಇಲ್ಲಿ ಉಲ್ಲೇಖಿಸಬಹುದು .

■ ಹಣಕ್ಕಾಗಿ ಕಟ್ಟಿಕೊಂಡ ಗಂಡನನ್ನು,ಮಕ್ಕಳನ್ನು ಬಿಟ್ಟು ಹೋಗುವ ನಟಿಯರು

■ ಅಪಾರ ಸಿರಿವಂತನನ್ನು ಮದುವೆಯಾಗಿ ಕೆಲ ದಿನಗಳ ನಂತರ ಜೀವನಾಂಶ ಹೆಸರಿನಲ್ಲಿ ಬರುವ ಕೋಟಿಗಟ್ಟಲೆ ಹಣದ ಆಸೆಗಾಗಿ ವಿಚ್ಛೇದನ ಪಡೆಯುವ ಸೆಲೆಬ್ರಿಟಿಗಳು …

ಇವರೆಲ್ಲ ಸಮಾಜಕ್ಕೆ ಕೊಡುವ ಸಂದೇಶವಾದರೂ ಏನು??

 ● ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಭಾಗಿಯಾದ ಪುರುಷನನ್ನು ಮುಖ್ಯ ಆರೋಪಿಯನ್ನಾಗಿ ಮಾಡಿ
ಸ್ತ್ರೀಯರನ್ನು ರಕ್ಷಿಸಲಾಗುತ್ತದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಪ್ಪಿತ ಹಾಗೂ ಕೆಲವು ವರ್ಷಗಳವರೆಗೆ ನಡೆದ ಲೈಂಗಿಕ ಸಂಬಂಧದಲ್ಲಿ ಪುರುಷನನ್ನಷ್ಟೇ ಏಕೆ ಆರೋಪಿಯಾಗುತ್ತಾನೆ ?
ಸ್ತ್ರೀಯು ಕೂಡ ಅವನೊಂದಿಗೆ ಒಪ್ಪಿತ ಸಂಬಂಧದಲ್ಲಿದ್ದು ಹಣ, ಆಸ್ತಿ, ಬೆಲೆ ಬಾಳುವ ವಸ್ತು ಅವನಿಂದ ಪಡೆದು ನಂತರ ಆರೋಪಿಸಿದಾಗ ಪುರುಷನನ್ನಷ್ಟೇ ಆರೋಪಿ ಮಾಡುವುದು ತಪ್ಪಲ್ಲವೇ ??
ಅಧಿಕಾರ ದುರ್ಬಳಕೆ ಮಾಡಿಕೊಂದೋ
 ಅಥವಾ ಹೆದರಿಸಿಯೋ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸುವ ಸ್ತ್ರೀಯರಿಗೆ ಅದು ಆಗ ತಪ್ಪೆಂದು ಅನಿಸುವುದಿಲ್ಲವೇ?
 ಅಂತಹ ಪುರುಷರಿಂದ  ಎಲ್ಲ ರೀತಿಯ ಲಾಭ ಪಡೆದು ನಂತರ ಅವನನ್ನೇ ದೂಷಿಯನ್ನಾಗಿ ಮಾಡಿ ತಾವು “ಅಬಲೆಯರು”
ಎಂದು ನಾಟಕ ಮಾಡುವ ಸ್ತ್ರೀಯರಿಂದ ಗಂಡಸರೇ ಹುಷಾರ್!

 ● ತಂದೆ ತಾಯಿ ಬಂಧು-ಬಳಗವನ್ನೇ ಬಿಟ್ಟು ತನ್ನೊಂದಿಗೆ ಬೇರೆ ಮನೆ ಮಾಡದಿದ್ದರೆ “ವರದಕ್ಷಿಣೆ ಕೇಸ್” ಹಾಕಿ ಮರ್ಯಾದಯುತ ಕುಟುಂಬವನ್ನು ಪೋಲಿಸ್ ಸ್ಟೇಷನ್ ಹತ್ತುವ ಹಾಗೆ ಮಾಡುವ ಹೆಂಗಸರಿಂದ ಗಂಡಸರೇ ಹುಷಾರ್!!!

● ಆಧುನಿಕ ಮಾಧ್ಯಮಗಳ ಸಹಾಯದಿಂದ ಗೆಳೆತನ ಬೆಳೆಸಿ ನಿಮ್ಮ ಸ್ವಾಭಾವಿಕ ದೌರ್ಬಲ್ಯವನ್ನು ಬಳಸಿಕೊಂಡು ಅಶ್ಲೀಲ ಫೋಟೋ ತೆಗೆದು ಅದನ್ನು ಬಳಸಿಕೊಳ್ಳುತ್ತಾ ನಿಮ್ಮನ್ನು ಬ್ಲಾಕ್ಮೇಲ್ ಮಾಡುವ  ನೀಚ ಹೆಣ್ಣುಗಳಿಂದ ಚಪಲ ಚೆನ್ನಿಗರಾಯರೇ ಹುಷಾರ್…

 ● ದುಡಿಯುವ ಭರಾಟೆಯಲ್ಲಿ ಮನೆ, ಮಕ್ಕಳು, ಮಡದಿಯ ಕಡೆಗೆ ಗಮನಕೊಡದೆ ಅವರ ಕೈಗೊಂಬೆಯಾಗಿ ಕೊನೆಗೆ ಅವರಿಂದಲೇ ದಾರುಣ ಅಂತ್ಯ ಕಾಣುವ ಗಂಡಸರೇ ಹುಷಾರ್…

 ● ಕಟ್ಟಿಕೊಂಡ ಗಂಡನನ್ನು, ಮಕ್ಕಳನ್ನು ಬಿಟ್ಟು ಬೇರೊಬ್ಬನೊಂದಿಗೆ ಓಡಿ ಹೋಗುವ ಮೋಸಗಾರ್ತಿಯರಿಂದ  ಗಂಡಸರೇ ಹುಷಾರ್!

 ● ಒಬ್ಬಳೇ ಮಗಳೇಂದು ಮುದ್ಧಿನಿಂದ ಬೆಳೆಸಿ ಬೇಡಿದಂತ ಎಲ್ಲವನ್ನು ಕೊಡಿಸಿ
 ಉನ್ನತ ಶಿಕ್ಷಣವನ್ನು ಕೊಡಿಸಿ ಉತ್ತಮ ಬಾಳು ಕಟ್ಟಿಕೊಟ್ಟ ತಂದೆಯನ್ನೇ ತಲೆ ತಗ್ಗಿಸುವಂತೆ ಮಾಡುವ ಮಗಳಿಂದ ಗಂಡಸರೇ ಹುಷಾರ್!

 ● ಕುಟುಂಬದಲ್ಲಿ ದುಡಿಯುವ ತಂದೆಯನ್ನೇ ಒಂಟಿಯನ್ನಾಗಿ ಮಾಡಿ ತಾಯಿ-ಮಕ್ಕಳು ಒಂದಾಗಿ ಮೋಸ ಮಾಡುವವರಿಂದ ಗಂಡಸರೇ ಹುಷಾರ್….

 ● ಈಗಂತೂ ಅನೈತಿಕ ಸಂಬಂಧಗಳ ಹಾವಳಿ ಹೆಚ್ಚಾಗಿದೆ. ಮೊಬೈಲ್ ಮನೆ-ಮನಗಳನ್ನು ಹಾಳುಗೆಡಿಸುತ್ತಿದೆ.
ಇಂತಹ ಹೆಂಡತಿ, ಹೆಣ್ಣುಗಳಿಂದ ಗಂಡಸರೇ ಹುಷಾರ್ …

ಇಲ್ಲಿ ಕೆಲವು ಘಟನೆಗಳನ್ನು ಉದಾಹರಣೆಗೆ ಕೊಟ್ಟಿದ್ದೇನೆ. ಆದರೆ ಸಮಾಜದಲ್ಲಿ ಸ್ವತಃ ನೋಡಿದ, ಕೇಳಿದ ಘಟನೆಗಳಲ್ಲಿ ಸೂಕ್ಷ್ಮ ಮನಸ್ಸಿನ ಪುರುಷರು ಕೆಲವು ನೀತಿಗೆಟ್ಟ ಮತಿಗೆಟ್ಟ ಹೆಂಗಸರ ಕುಹಕ ಬುದ್ದಿಗೆ ಸಿಲುಕಿ ನಲುಗಿ ಹೋಗುತ್ತಿದ್ದಾರೆ.
(ಎಲ್ಲ ಸ್ತ್ರೀಯರು ಹೀಗೆ ಎಂದೇನು ನಾನು ಹೇಳುವುದಿಲ್ಲ).  

ಸ್ತ್ರೀಯರಾದರೆ ನೋವನ್ನು ಬೇರೆಯವರೊಂದಿಗೆ ಹೇಳಿಕೊಂಡು ಅತ್ತು ಹಗುರಾಗುತ್ತಾರೆ. ಆದರೆ  ಪುರುಷರಿಂದ ಇದು ಅಸಾಧ್ಯ.ಆಗ ಅವರು ಕೆಟ್ಟ ಚಟಗಳ ದಾಸರಾಗುತ್ತಾರೆ. ಆತ್ಮಹತ್ಯೆಗೆ ಶರಣಾಗುತ್ತಾರೆ ಇಲ್ಲವೇ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಇದ್ದು ಸತ್ತಂತಾಗುತ್ತಾರೆ.

● ಇಂಥಹ ಮಾನಸಿಕವಾಗಿ ಕೌಟುಂಬಿಕವಾಗಿ ಸ್ತ್ರೀಯರು ಮಾಡುವ ಬ್ಲಾಕ್ಮೇಲ್ ಗಳಿಗೆ ಕಾನೂನಿನಲ್ಲಿ ಶಿಕ್ಷೆ ಇಲ್ಲ.

 ● ಉದಾಹರಣೆಗೆ ಹೆಂಡತಿಗಾಗಿ ತಂದೆ ತಾಯಿಯನ್ನೇ ದೂರ ಮಾಡಿಕೊಂಡು ತೊಳಲಾಡುವ ಮಗನ ಮನದ ದುಃಖವನ್ನು ಯಾವ ಕಾನೂನಿಂದ ಸರಿ ಮಾಡಬಹುದು ಹೇಳಿ?

 ಇಂತಹ ಅನೇಕ ಸೂಕ್ಷ್ಮ ವಿಷಯಗಳು ಪುರುಷರನ್ನು ಬಲಹೀನರನ್ನಾಗಿ ಮಾಡುತ್ತಿವೆ. ಮಾನಸಿಕವಾಗಿ ದೈಹಿಕವಾಗಿ ಪುರುಷ ಪ್ರಬಲನಾಗಿದ್ದರೆ ಇಂಥ ಹೀನಗುಣದ ಹೆಂಗಸರಿಂದ ಪಾರಾಗಬಹುದು.
ಆದರೂ ಸ್ತ್ರಿ ಪರ ಕಾನೂನುಗಳು ಸ್ತ್ರೀಯರ ಸ್ವಚ್ಛಾಚಾರಕ್ಕೆ ಕಾರಣವಾಗಿ ಕುಟುಂಬ ಮತ್ತು ಸಮಾಜ ವ್ಯವಸ್ಥೆಯನ್ನು ಹದಗೆಡಿಸುತ್ತಿವೆ.  
ಅತಿಯಾದರೆ ಅಮೃತವು ವಿಷವಾದಂತೆ ಅಲ್ಲವೇ….

● ಮೊಬೈಲ್ನಿಂದ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಕುಟುಂಬದ ಘನತೆಯನ್ನೇ ಮರೆತು ಮನಸೋ ಇಚ್ಛೆ  ವರ್ತಿಸುತ್ತಿದ್ದಾರೆ.

 ● ಇತ್ತೀಚಿಗೆ ತನಗೆ ಬೇಕಾದಂತೆ ಮದುವೆಯಾದ ಮಗಳ  ಕಾಲು ಹಿಡಿದು ಅಳುತ್ತಿರುವ ತಂದೆಯ ವರದಿಯೊಂದನ್ನು ಓದಿ ಮನಸ್ಸಿಗೆ ದುಃಖವಾಯಿತು.

 ● ಕ್ಲಬ್, ಸಂಘ ,ಸಂಘಟನೆ ಆ ಕೆಲಸ ಈ ಕೆಲಸ ಹೀಗೆ ಏನೇನು ನೆಪ ಹೇಳಿ ಗಂಡನಿಗೆ ಮೋಸ ಮಾಡುತ್ತ ಸಮಾಜ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ ಕೆಲ ಮಹಿಳೆಯರು,ನಿಜವಾಗಿ ಪ್ರಾಮಾಣಿಕತೆಯಿಂದ ದುಡಿಯುವ ಮಹಿಳೆಯರಿಗೂ
ಕಳಂಕ ತರುತ್ತಿದ್ದಾರೆ.

 ● ಎಷ್ಟೋ ಲೈಂಗಿಕ ದೌರ್ಜನ್ಯದ ಕೇಸ್ ಗಳಲ್ಲಿ ಆ ಪುರುಷನಿಂದ ಎಲ್ಲವನ್ನು ಪಡೆದು ನಂತರ ಕಾನೂನಿನ ಸಹಾಯದಿಂದ ಅವನನ್ನು ಆರೋಪಿನ್ನಾಗಿ (ಅವಳ ತಪ್ಪಿದ್ದು ಅವಳು ಒಪ್ಪಿದ್ದರೆ) ಅವಳಿಗೂ ಶಿಕ್ಷೆಯಾಗಬೇಕು.

 ಈ ನಿಟ್ಟಿನಲ್ಲಿ ಗಂಡಸರೇ ನೀವೆಲ್ಲ ಒಗ್ಗಟ್ಟಾಗಬೇಕು.

 ● ಪ್ರೀತಿಯ ನಾಟಕವಾಡಿ ಅವನಿಂದ ಎಲ್ಲವನ್ನು ಪಡೆದು ನಂತರ ತಿರಸ್ಕರಿಸುವ ಹೆಣ್ಣು ಪುರುಷನಿಗೆ ಒಂದು ಮನಸ್ಸಿದೆ
ಎನ್ನುವುದನ್ನು ಅರಿಯಬೇಕು.

 ● ಒಟ್ಟಿನಲ್ಲಿ ಕಾನೂನಾತ್ಮಕವಾಗಿ,
ಸಾಮಾಜಿಕವಾಗಿ ಒಂದು ಹೆಣ್ಣು ಪುರುಷನನ್ನು ಅಧೋಗತಿಗೆ ತಂದಾಗ  ಆ ಪುರುಷನ ಪಾಡೇನು?

 ಅವನಿಗೂ ಒಂದು ಮನಸ್ಸಿದೆ ಎನ್ನುವ ಸೂಕ್ಷ್ಮ ಪರಿಜ್ಞಾನ ಹೆಂಗಸರಿಗೆ ಇರಬೇಕು.

 ● ಪುರುಷರಲ್ಲಿ ಕೆಟ್ಟವರು ಒಳ್ಳೆಯವರು ಇದ್ದಂತೆ ಸ್ತ್ರೀಯರಲ್ಲೂ ಕೆಟ್ಟವರು ಒಳ್ಳೆಯವರು ಇದ್ದಾರೆ. ಆದರೆ ಯಾವಾಗಲೂ ಸ್ತ್ರೀಯರ ಪರ ನಿಲ್ಲುವ ಸಮಾಜ, ಕಾನೂನು ಇಂಥ ಸಂದರ್ಭಗಳಲ್ಲಿ ನಿರ್ದೋಶಿ ಪುರುಷರ ಬೆಂಬಲಕ್ಕೆ ನಿಂತು ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸುವ ಕಾನೂನು ರಚನೆಯಾಗಲಿ ಎಂಬುದೇ ಈ ಲೇಖನದ ಸದಾಶಯ.

● ಅತಿಯಾದ ಸ್ತ್ರೀ ಸೌಲಭ್ಯ ಹಾಗೂ ಸ್ತ್ರೀ ಪರ ಓಲೈಕೆ ಕಾನೂನುಗಳು ಒಂದು ತರದ social imbalnce ಗೆ ಕಾರಣವಾಗಿ ಅಪರಾಧಗಳು ಹೆಚ್ಚಾಗಲು ಕಾರಣವೆಂದೇ ಹೇಳಬಹುದು.
ಇದು ವೈಜ್ಞಾನಿಕವಾಗಿಯೂ ಸತ್ಯ.
ಉದಾಹರಣೆಗೆ ಉಚಿತ ಬಸ್ ಸೌಲಭ್ಯ.
ಇದರಿಂದ ಪುರುಷರು ಸ್ತ್ರೀಯರನ್ನು ಅತ್ಯಂತ ಕೀಳಾಗಿ ಕಾಣುತ್ತಿದ್ದಾರೆ.ಇದನ್ನು ನಾವೇನು ಬೇಡಿಲ್ಲ.ಸರಕಾರದ ಸೌಲಭ್ಯವಿದು.
ಆದರೆ ಪುರುಷರ ಕೆಂಗಣ್ಣಿಗೆ
ನಾವು ಗುರಿಯಾಗಿದ್ದೇವೆ…..
(ಇದರಲ್ಲಿ ಕೆಲವು ಹೆಂಗಸರು ಮಾಡುವ ಅತಿರೇಕಗಳು ಹೆಣ್ಣಿನ ಕುಲಕ್ಕೆ ಅವಮಾನವಾಗುತ್ತಿವೆ.)

ಹೀಗೆ ಸರಕಾರ ಕೆಲವು ಸೌಲಭ್ಯಗಳನ್ನು ಪುರುಷರಿಗೂ ನೀಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲಿ….

 ಈ ಮೂಲಕ ಪ್ರತಿಪುರುಷನಿಗೂ ಮಾನಸಿಕ,ಸಾಮಾಜಿಕ ಬೆಂಬಲ ಸರಕಾರ ಹಾಗೂ ಸಮಾಜ ನೀಡವಂತಾಗಲಿ…


One thought on “ಗಂಡಸರೇ ಹುಷಾರ್!ಎನಾಗುತ್ತಿದೆ ಈ ಸಮಾಜಕ್ಕೆ??ಮೀನಾಕ್ಷಿ ಸೂಡಿ ಅವರ ಲೇಖನ

Leave a Reply

Back To Top