ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಳ ಸಂಚು ನಡೆಸಿದ್ದಾರೆ
ದ್ವೇಷದ ಸಾಧಿಸಲು ನಗುವಿನ ಮರೆಯಲಿ..
ಆಸರೆಯ ಸೂರಿನಲಿ ಭರವಸೆಯ
ಗೋಡೆಗೆ  ಕನ್ನ ಕೊರೆದಿದ್ದಾರೆ..

ಶಬ್ದ ಜಾಲದಲಿ ಮೋಡಿಮಾಡಿ
ಮೋಸದ ಬಲೆಯನೇ ಬೀಸಿದ್ದಾರೆ..
ಹನಿ ವಿಷವ ಬೆರೆಸಿದ್ದಾರೆ
ಪ್ರೀತಿಯ ಜೇನಿಗೆ ಗೊತ್ತಾಗದಂತೆ..

ಕುಹಕ ನೋಟ ಬೀರಿದ್ದಾರೆ
ಮುಗ್ಧತೆಯ ಮುಖವಾಡ ಧರಿಸಿ..
ವಂಚನೆಯ ಬಣ್ಣ ಬಳಿದಿದ್ದಾರೆ
ಮಿಥ್ಯದ ತೆರೆಗೆ  ಸ್ವಾರ್ಥ ಸಾಧನೆಗೆ…

ಭಯದ ಬೀಜ ಬಿತ್ತಿದ್ದಾರೆ
ಅನುಕಂಪದ ಭಾವ ತೋರುತ..
ಕರುಣೆಯ ಕೋಡಿ ಹರಿಸಿ
ಕ್ರೌರ್ಯದ ನಡೆ  ತೋರಿದ್ದಾರೆ..

ಇದೆಂಥ ಅನ್ಯಾಯದ ವರ್ತನೆ  ಖುದಾ..
ಇದಕೆಲ್ಲ  ಅಂತ್ಯ  ಎಂದು…?


About The Author

2 thoughts on “ಹಮೀದಾಬೇಗಂ ದೇಸಾಯಿ ಅವರ ಕವಿತೆ-ಅಂತ್ಯ ಎಂದು…?”

Leave a Reply

You cannot copy content of this page