ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೌನದ ನೇಣಿಗೇರಿದ ಮಾತು
ಮತ್ತೆ ಹೊರಗೆ ಬರಲೇ ಇಲ್ಲ
ಮುಗಿದ ಮಾತಿನ ನಂತರ
ಬದುಕು ಮತ್ತೆ ಅರಳಲೆ ಇಲ್ಲ
ನೋವಿನಿಂದ ಬಿಗಿದ ಕೊರಳು
ನಲಿವು ಕಾಣಲೇ ಇಲ್ಲ
ಕಣ್ಣಲ್ಲಿ ತುಂಬಿದ ಕಂಬನಿ
ಕರಗಿ ಹೊರಗೆ ಬರಲೇ ಇಲ್ಲ
ಮೊದಲಿದ್ದ ಲವಲವಿಕೆಯ
ಚಿಲುಮೆ ಮತ್ತೆ ಚಿಮ್ಮಲಿಲ್ಲ
ಕತ್ತಲಿಟ್ಟ ಮನದ ಮೂಲೆಯಲ್ಲಿ
ಬೆಳಕು ಮೂಡಲೇ ಇಲ್ಲ
ಯಾರದೋ ಪಿತೂರಿಗೆ
ಮುಗ್ಧಮನಸು ಬಲಿ ಆಯಿತಲ್ಲ
ವಾಸ್ತವದ ಅರಿವಿರದ ಮೇಲೆ
ಮಾತನಾಡುವುದು ತರವಲ್ಲ
ಇನ್ನೊಬ್ಬರಿಗೆ ನೋವನೀಡಿ
ಖುಷಿಯ ಪಡುವುದು ಯೋಗ್ಯವಲ್ಲ
ಸಾಗುವ ದಾರಿಯಲಿ ಮುಳ್ಳನ್ನೆಟ್ಟಿ
ಹೂವ ಬೆಳೆಯುವುದು ಸಾಧ್ಯವಿಲ್ಲ
ಬೆಳಕ ಬಿತ್ತಿ ಮುಂದೆ ಸಾಗಬೇಕು
ಬರುವವರಿಗೆ ದಾರಿದೀಪವಾಗಬೇಕು


About The Author

1 thought on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಸಾಗುವ ದಾರಿಯಲಿ”

Leave a Reply

You cannot copy content of this page

Scroll to Top