ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾವ ಹೊಮ್ಮುತ್ತಿಲ್ಲ ಹಲವು ದಿನ ಸುಮ್ಮನಾಗಲೆ ತಿಳಿವೇ
ಲೇಖನಿ ಸಹಕರಿಸುತ್ತಿಲ್ಲ ಕೆಲವು ದಿನ ಪಕ್ಕಕಿರಿಸಲೆ ತಿಳಿವೇ

ಸದಾ ಚರ್ಚೆಯಲಿ ಇರವ ರಾಜಕಾರಣಿಯು ನಾನಾಗಬಯಸೆ.
ಕೋಳಿ ಕೂಗೆ ಬೆಳಗಾಯ್ತೆಂದು ತಿಳಿವ ತಿಮ್ಮನಾಗಲೆ ತಿಳಿವೇ

ಕರ್ಕಿಯವರ ಹಚ್ಚೇವು ಕುವೆಂಪು ಭಾರತ ಜನನಿಗೆ ಸಮಗೌರವ
ಜ್ಞಾನಪೀಠವಿಲ್ಲ ಕರ್ಕಿಯವರಿಗೆ ಹಾಡ ಮರೆತು ಸುಮ್ಮನಾಗಲೆ ತಿಳಿವೇ

ಜ್ಞಾನ ಹೇಳುತಿದೆ ನೀ ಬರೆಯದಿರೆ ಯಾವ ಅನಾಹುತ ಆಗದೆಂದು
ವ್ಯವಹಾರಿಕ ಜೀವನಸತ್ಯ ಅರಿತು ಹಿಂದುಳಿದವ ನಾನಾಗಲಾರೆ ತಿಳಿವೇ

ಪರಿಜ್ಞಾನ ಹೇಳುತಿದೆ ಸತ್ಯಕೆ ನಿಂತು ವಿಧುರ ನಂತವನಾಗೆಂದು
ತಪ್ಪಿ ಕೃಷ್ಣನಂತ ದೇವನಿಗೆ ಅತಿಥೇಯ ಬಡವ ನೀನಾಗಲಾರೆ ತಿಳಿವೇ

About The Author

Leave a Reply

You cannot copy content of this page

Scroll to Top