ಸೃಷ್ಟಿ ಅಶೋಕ ಎಲಿಗಾರ ಅವರ ಕವಿತೆ ‘ಕನಸುಗಳು ಗುರಿಯಾಗಿವೆ’

ಮೆಲ್ಲನೆ ಹೃದಯ ಸ್ಪರ್ಶಿಸಿ,
ಕಣ್ಣಿಂದ ಗಮನಿಸಿ,
ಮನದಲ್ಲಿ ಹುಟ್ಟಿ,
ಈ ಕನಸುಗಳು ಗುರಿಯಾಗಿ ನಿಂತಿವೆ.

ಸತತ ಪ್ರಯತ್ನ,
ಆತ್ಮ ಬಲ ದೊಂದಿಗೆ
ಜ್ಞಾನದ ಬೆಳಕು,
ಮನದ ಅಂಗಳದ ದೀಪವಾಗಿದೆ.

ಈ ಗುರಿ ಬೆಂಕಿಯಂತೆ ಉಜ್ವಲಿಸಿ,
ಗುರಿ ತಲುಪಿದ ಮೇಲೆ,
ದೀಪದಂತೆ ಈ ಜಗತ್ತಿಗೆ ಬೆಳಕಾಗಲಿ.

ಇದು ನನ್ನ ಕನಸು,
ಇದು ನನ್ನ ಗುರಿಯಾಗಿದೆ.


3 thoughts on “ಸೃಷ್ಟಿ ಅಶೋಕ ಎಲಿಗಾರ ಅವರ ಕವಿತೆ ‘ಕನಸುಗಳು ಗುರಿಯಾಗಿವೆ’

Leave a Reply

Back To Top