ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸರಳತೆಯ ಸಾಕಾರ ಮೂರುತಿಯ ನಾಯಕ
ಜೈ ಜವಾನ ಜೈ ಕಿಸಾನ ಘೋಷಣೆಯ ಜನಕ
ಶಾರದಾಪ್ರಸಾದ ರಾಮದುಲಾರಿ ದೇವಿ ಕನಕ
ಮೊಘಲಸರಾಯಿ ಹಳ್ಳಿಯ ಪದಕ

ಗಂಗಾ ನದಿ ಈಜಿ ಹೋದ ಧೀಮಂತ ಬಾಲಕ
ಕಾಶೀ ವಿದ್ಯಾಪೀಠದಲಿ ಶಾಸ್ತ್ರೀ ಪದವಿ ಪಡೆದ ನಾಯಕ
ಲಲಿತಾದೇವಿಯ ಕೈಹಿಡಿದ ವರದಾಯಕ
ಸ್ವಾತಂತ್ರ ಹೋರಾಟದ ಕೆಚ್ಚೆದೆಯ ಸೈನಿಕ

ರೈಲು ಮಂತ್ರಿಯಾಗಿ ದಿಟ್ಟ ಹೆಜ್ಜೆ ಇಟ್ಟ
ಮಕ್ಕಳಿಗಾಗಿ ಆಸ್ತಿಮಾಡದ ಮಾದರಿ ಕೊಟ್ಟ
ಭಾರತೀಯರ ಅಚ್ಚುಮೆಚ್ಚಿನ ಪ್ರಧಾನಿ ಪಟ್ಟ
ತಾಷ್ಕೆಂಟ ಐತಿಹಾಸಿಕ ಒಪ್ಪಂದಕ್ಕೆ ಸಹಿ ಇಟ್ಟ

ಹಸಿರು ಕ್ರಾಂತಿಯ ಪ್ರೇರಕ
ಸೋಮವಾರ (ಶಾಸ್ತ್ರೀ) ಉಪವಾಸದ ಜನಕ
ಪ್ರಾಮಾಣಿಕತೆಯ ರೂಪಕ
ಮನಮನದಲ್ಲಿ ಅಚ್ಚೊತ್ತಿದ ನಾಯಕ

ಭವ್ಯ ಭಾರತದ ಜನಮನ ಹೃದಯತಟ್ಟಿದ
ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಗುಡುಗಿದ
ಮೂರುತಿ ಚಿಕ್ಕದಾದರೂ ಕಿರುತಿ ದೊಡ್ಡದು
ಸರಳ ಸಜ್ಜನಿಕೆಯ ಲಾಲಬಹಾದ್ದೂರ ಶಾಸ್ತ್ರಿ ಅವರದು


About The Author

5 thoughts on “‘ಸರಳ ಸಜ್ಜನಿಕೆಯ ಮೂರುತಿ ಲಾಲಬಹಾದ್ದೂರ ಶಾಸ್ತ್ರಿ’ಡಾ.ದಾನಮ್ಮ ಝಳಕಿ ಅವರ ಕವಿತೆ”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅರ್ಥಪೂರ್ಣ ಕವಿತೆ ಧನ್ಯವಾದಗಳು ಮೇಡಂ

Leave a Reply

You cannot copy content of this page

Scroll to Top