ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಂದು ಭಗತನ
ಹುಟ್ಟು ಹಬ್ಬ
ಹುತಾತ್ಮನಾಗಲೆಂದೇ
ಹುಟ್ಟಿ ಬಂದ
ಎಳೆಯತನದಲಿ
ಎದೆಯಲ್ಲಿ ಬಿದ್ದ
ಕ್ರಾಂತಿ ಬೀಜ ಬೆಳೆದು
ಹೆಮ್ಮರವಾಯಿತು
ದಂಗೆ ಎದ್ದನು ಸುಖದೇವ್
ರಾಜಗುರರೊಡನೆ
ಕೆಂಪು ಮೋತಿ
ಬ್ರಿಟಿಷರ ಅಟ್ಟಾಡಿಸಿ
ಹೊಡೆದನು ಕೊಂದನು
ಆಂಗ್ಲ ಅಧಿಕಾರಿ
ಸ್ವರಾಜ್ಯದ ಕನಸು
ಕಂಡ ಚಿಗುರು
ಮೀಸೆ ಯುವಕ
ಖೈದಿಯಾದನು
ದೇಶ ವಿಮುಕ್ತಿಗೊಳಿಸಲು.
ಎಳೆಯ ಗೋಣು ಕುಣಿಕಿಗೆ
ರಕ್ತ ಚೆಲ್ಲಿತು ನೆಲಕೆ
ಎಲ್ಲರ ಕಣ್ಣಲ್ಲಿ ಕಣ್ಣೀರು
ಭಗತನ ಮುಖದಲ್ಲಿ
ಮಂದಹಾಸದ ನಗೆ
ಹುಟ್ಟಿದ ಭಗತ
ಹುತಾತ್ಮನಾದ
ಭಗತ ಸಿಂಗ ಅಮರ ರಹೆ


About The Author

3 thoughts on “ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’”

  1. ಭಗತ ಸಿಂಗ್ ನ ರಾಷ್ಟ್ರ ಪ್ರೇಮ ಬಿಂಬಿಸುವ ಕವನ ಎಲ್ಲರಲ್ಲಿ ದೇಶಭಕ್ತಿಯನ್ನು ಹುಟ್ಟುಹಾಕುವುದರಲ್ಲಿ ಎರಡು ಮಾತಿಲ್ಲ
    ನಮ್ಮ ದೇಶದ ಸಲುವಾಗಿ ಹೋರಾಡಿದ ಮಹನೀಯರನ್ನು ನೆನೆಯುವ.. ಅವರಿಗೆ ಅಭಿಮಾನದ ನುಡಿನಮನವನ್ನು ಸಲ್ಲಿಸುವ ನಿಮ್ಮ ಕವನ ಮನಮುಟ್ಟುವಂತಿದೆ.. ಸರ್

    ಸುತೇಜ

  2. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ದೇಶಭಕ್ತನ ನೆನಪು ಅಜರಾಮರ ಕವಿತೆ ಚೆನ್ನಾಗಿದೆ ಸರ್ ಧನ್ಯವಾದಗಳು

Leave a Reply

You cannot copy content of this page

Scroll to Top