ಕರ್ನಾಟಕ ಗಜಲ್ ಅಕಾಡೆಮಿ, ಬೆಂಗಳೂರು (ರಿ)

 ಕರ್ನಾಟಕ ಗಜಲ್ ಅಕಾಡೆಮಿ, ಬೆಂಗಳೂರು (ರಿ)
ಫೈಲ್: ಗಜಲ್ ನ್ಯೂಸ್-೩
ಅಫಜಲಪುರದ ಅರ್ಜುಣಗಿ ಸೊಸೆಗೆ ಗೌರವ  |  ಗಜಲ್ ಕವಯಿತ್ರಿ ಪ್ರಭಾವತಿ ದೇಸಾಯಿ ಸಮ್ಮೇಳನಾಧ್ಯಕ್ಷೆ
ನಟ ಶ್ರೀನಿವಾಸ ಪ್ರಭು-ರಂಜಿನಿ ಅವರಿಂದ `ಗಜಲ್ ಜುಗಲ್ ಬಂದಿ’ | ಕಲಬುರಗಿಯಲ್ಲಿ ಇಡೀ ದಿನ `ಗಜಲ್ ಸಂಭ್ರಮ’ |
ಪ್ರಾತಿನಿಧಿಕ `ಗಜಲ್ ನಾದಲೋಕ’ ಕೃತಿ ಬಿಡುಗಡೆ | ೧೦೦ ಕ್ಕೂ ಅಧಿಕ ಗಜಲಕಾರರು ಭಾಗಿ.
ಕಲಬುರಗಿ: ೨೫ ರಂದು ರಾಜ್ಯ ಮಟ್ಟದ ಪ್ರಥಮ ಗಜಲ್ ಸಮ್ಮೇಳನ
ಕಲಬುರಗಿ, ಆ. ೨೦ – ಕರ್ನಾಟಕ ಗಜಲ್ ಅಕಾಡೆಮಿ ಬೆಂಗಳೂರು ವತಿಯಿಂದ ಇದೇ ಆಗಸ್ಟ್ ೨೫ ರಂದು ಒಂದು ದಿನದ `ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನ’ವನ್ನು ಗುಲಬರ್ಗ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನ ಸಂಚಾಲಕರಾದ ಮಹಿಪಾಲರೆಡ್ಡಿ ಮುನ್ನೂರ್ ಹಾಗೂ ಅಬ್ದುಲ್ ಹೈ ತೋರಣಗಲ್ಲು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಗಜಲ್ ಆರಂಭಿಸಿದ ಆದ್ಯ ಗಜಲಕಾರ, ಗಜಲ್ ಗಾರುಡಿಗ ಶಾಂತರಸ ಅವರ ಹೆಸರಿನ ವೇದಿಕೆ ಹಾಗೂ ಗಜಲ್ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಂಬಣ್ಣ ಅಮರಚಿಂತ ರಾಯಚೂರು, ಚಂದ್ರಕಾAತ ಕುಸನೂರ ಕಲಬುರಗಿ, ಅಬ್ದುಲ ಮಜೀದಖಾನ್ ಸಾಗರ, ಇಟಗಿ ಈರಣ್ಣ ಬಳ್ಳಾರಿ, ಸುಜಾತಾ ಲಕ್ಮನೆ ಬೆಂಗಳೂರು ಹಾಗೂ ರಮೇಶ ಹೆಗಡೆ ಸಿರಸಿ  ಹೆಸರಿನ ಮಹಾದ್ವಾರ ಇರುತ್ತವೆ. ವಿಜಯಪುರದ ಕವಯಿತ್ರಿ, ಒಂಬತ್ತು ಗಜಲ್ ಸಂಕಲನ ಸೇರಿ ೨೩ ಕೃತಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿರಿಯ ಗಜಲಕಾರ್ತಿ ಶ್ರೀಮತಿ ಪ್ರಭಾವತಿ ದೇಸಾಯಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರ ಅಧ್ಯಕ್ಷತೆಯಲ್ಲಿ ಇಡೀ ಒಂದು ದಿನ ಗಜಲ್ ಸಂಭ್ರಮ ನಡೆಯಲಿದೆ. ಹಾಗೂ ಪ್ರಾತಿನಿಧಿಕ ಗಜಲ್ ಕೃತಿಯೊಂದು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.


೭೭ ವರ್ಷದ ಹಿರಿಯ ಗಜಲಕಾರ್ತಿ ಪ್ರಭಾವತಿ ದೇಸಾಯಿ ಅವರು ಮೂಲತಃ ರಾಯಚೂರಿನವರು. ಕನ್ನಡದ ಗಜಲ್ ಹುಟ್ಟಿದ ಮೂಲ ನೆಲೆಯವರು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿ ಅರ್ಜುಣಗಿ ದೇಸಾಯಿ ಮನೆತನದ ಸೊಸೆಯಾಗಿದ್ದು, ಇದೀಗ ವಿಜಯಪುರದಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದರು.
ಬೆಳಿಗ್ಗೆ ೧೦ ಕ್ಕೆ ಸಮಾರಂಭವನ್ನು ಕಲಬುರಗಿ ಲೋಕಸಭಾ ಸದಸ್ಯರಾದ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸುವರು. ಕಲಬುರಗಿಯ ಕವಯಿತ್ರಿ ಬಸ್ಸಮ್ಮ ಸಜ್ಜನ್ ಅವರು ಸಂಪಾದಿಸಿರುವ `ಗಜಲ್ ನಾದಲೋಕ’ ಪ್ರಾತಿನಿಧಿಕ ಕೃತಿಯನ್ನು ಗುಲಬರ್ಗ ವಿವಿ ಕುಲಪತಿಗಳಾದ ಡಾ. ದಯಾನಂದ ಅಗಸರ ಬಿಡÀÄಗಡೆ ಮಾಡುವರು. ಗುಲಬರ್ಗ ನಗರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಮಜರ್ ಆಲಂ ಖಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ಅಧ್ಯಕ್ಷತೆ ವಹಿಸುವರು.
`ಸಮ್ಮೇಳನಾಧ್ಯಕ್ಷರ ಬದುಕು-ಬರಹ’ ಮೊದಲ ಗೋಷ್ಠಿಗೆ ಬೆಂಗಳೂರಿನ ಗಜಲಕಾರ ಸಂಗಮೇಶ್ ಬಾದವಾಡಗಿ ಚಾಲನೆ ನೀಡುವರು. ಬಳ್ಳಾರಿಯ ಗಜಲಕಾರ ಸಿಕಂದರ್ ಅಲಿ ಅಧ್ಯಕ್ಷತೆ ವಹಿಸುವರು. ಯುವ ಗಜಲಕಾರ ನಂರುಶಿ ಕಡೂರು ಸಮ್ಮೇಳನಾಧ್ಯಕ್ಷರ ಬದುಕು ಬರಹ ಕುರಿತು ಮಾತನಾಡುವರು.
ಗಜಲ್ ಹೆಜ್ಜೆ ಗುರುತು ಕುರಿತು ಎರಡನೇ ಗೋಷ್ಟಿಯನ್ನು ಮಂಗಳೂರಿನ ಗಜಲಕಾರ ಡಾ. ಸುರೇಶ್ ನೆಗಳಗುಳಿ ಚಾಲನೆ ನೀಡುವರು. ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ಅಧ್ಯಕ್ಷತೆ ವಹಿಸುವರು. ಸವದತ್ತಿಯ ವಿಮರ್ಶಕ ಡಾ. ಎಂ.ವೈ. ಯಾಕೋಳ್ಳಿ- ಗಜಲ್ ಆಕೃತಿ ಮತ್ತು ಆಶಯ,  ಅಂಕೋಲಾ ಗಜಲ್ ಕವಯಿತ್ರಿಶ್ರೀದೇವಿ ಕೆರೆಮನೆ- ಕನ್ನಡ ಸಾಹಿತ್ಯದಲ್ಲಿ `ಗಜಲ್’ ಹಾಗೂ  ಕೊಪ್ಪಳದ ಕವಯಿತ್ರಿ ಅರುಣಾ ನರೇಂದ್ರ – ಕಲ್ಯಾಣ ಕರ್ನಾಟಕ ನೆಲದಲ್ಲಿ `ಗಜಲ್’ ಕುರಿತು ಉಪನ್ಯಾಸ ನೀಡುವರು. ನಂತರ ನಡೆಯುವ ಗಜಲ್ ವಾಚನ ಗೋಷ್ಠಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್ ಚಾಲನೆ ನೀಡುವರು. ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯೆ ಡಾ. ಜಯದೇವಿ ಗಾಯಕವಾಡ್ ಅಧ್ಯಕ್ಷತೆ ವಹಿಸುವರು. ಸುಮಾರು ೪೦ ಜನ ಗಜಲಕಾರರು ಭಾಗವಹಿಸುವರು.


ಗೋಷ್ಟಿ ನಾಲ್ಕರಲ್ಲಿ ವಿಶಿಷ್ಟ ಕಾರ್ಯಕ್ರಮ `ನಿನ್ನ ಗಜಲಿಗೆ ನನ್ನ ಕವಿತೆ- ಜುಗಲ್‌ಬಂದಿ’ ಯನ್ನು ಸಿನಿಮಾ, ಕಿರುತೆರೆ ನಟರಾದ ಶ್ರೀನಿವಾಸಪ್ರಭು ಮತ್ತು ಡಾ. ರಂಜಿನಿಪ್ರಭು ಬೆಂಗಳೂರು ನಡೆಸಿಕೊಡುವರು. ಮಂಗಳೂರಿನ ಹಿರಿಯ ಗಜಲಕಾರ ಮಹಮ್ಮದ್ ಬಡ್ಡೂರು ಚಾಲನೆ ನೀಡುವರು. ಕೊಪ್ಪಳ ಕವಯಿತ್ರಿ ಅನುಸೂಯ ಜಹಾಗೀರದಾರ್ ಅಧ್ಯಕ್ಷತೆ ವಹಿಸುವರು.
ಎರಡನೇ ಗಜಲ್ ವಾಚನ ಗೋಷ್ಟಿಯನ್ನು ಹಿರಿಯ ಗಜಲಕಾರ ಡಾ. ಕಾಶಿನಾಥ ಅಂಬಲಗೆ ಚಾಲನೆ ನೀಡುವರು. ಹುಬ್ಬಳ್ಳಿಯ ಗಜಲ್ ಕವಯಿತ್ರಿ ಡಾ. ರೇಣುಕಾತಾಯಿ ಸಂತಬಾ ಅಧ್ಯಕ್ಷತೆ ವಹಿಸುವರು. ಸುಮಾರು ೪೫ ಜನ ಗಜಲಕಾರರು ಭಾಗವಹಿಸುವರು.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ  ಗುಲ್ಬರ್ಗಾ ವಿ.ವಿ ಉರ್ದು-ಪರ್ಶಿಯನ್ ವಿಭಾಗ ಮುಖ್ಯಸ್ಥ ಪ್ರೊ. ಅಬ್ದುಲ್ ರಬ್ ಉಸ್ತಾದ್ ಸಮಾರೋಪ ನುಡಿಗಳಾಡುವರು. ಸಮ್ಮೇಳನಾಧ್ಯಕ್ಷೆ ಪ್ರಭಾವತಿ ಎಸ್.ದೇಸಾಯಿ ಉಪಸ್ಥಿತರಿರುವರು. ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಚಂದ್ರಕಲಾ ಬಿದರಿ, ಗಜಲಕಾರ ಬೋಡೆ ರಿಯಾಜ್ ಅಹ್ಮದ್ ಮುಖ್ಯ ಅತಿಥಿಗಳಾಗಿರುವರು. ರಾಯಚೂರಿನ ಗಜಲಕಾರ ಮಂಡಲಗಿರಿ ಪ್ರಸನ್ನ ಅಧ್ಯಕ್ಷತೆ ವಹಿಸುವರು.
ಸುದ್ದಿಗೋಷ್ಟಿಯಲ್ಲಿ ಪ್ರಭುಲಿಂಗ ನೀಲೂರೆ, ಡಾ.ಪ್ರೇಮಾ ಹೂಗಾರ, ಗೌರಿ ಪಾಟೀಲ, ಸಿದ್ದರಾಮ ಸರಸಂಬಿ, ಡಾ.ಕಪಿಲ್ ಚಕ್ರವರ್ತಿ ಇತರರಿದ್ದರು.


ಮಹಿಪಾಲರೆಡ್ಡಿ ಮುನ್ನೂರ್
ಕಾರ್ಯದರ್ಶಿ, ಕರ್ನಾಟಕ ಗಜಲ್ ಅಕಾಡೆಮಿ, ಬೆಂಗಳೂರು

One thought on “ಕರ್ನಾಟಕ ಗಜಲ್ ಅಕಾಡೆಮಿ, ಬೆಂಗಳೂರು (ರಿ)

  1. ಪ್ರಥಮ ಅಖಿಲ ಕರ್ನಾಟಕ ಗಝಲ್
    ಸಮ್ಮೇಳನ ನಮ್ಮೂರು ಕಲಬುರಗಿ ಯಲ್ಲಿ ನಡೀತಾ ಇದೆ.. ನಮಗೆ ಹೆಮ್ಮೆಯ ವಿಷಯ
    ಶುಭವಾಗಲಿ

    Sripad Algudkar ✍️
    Kalburgi Pune

Leave a Reply

Back To Top