ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೇದೀಪ್ಯಮಾನ

ರೇಶ್ಮಾ ಗುಳೇದಗುಡ್ಡಾಕರ್

ಎಲ್ಲ ಕಳೆದುಕೊಂಡೆ ಎಂದು
ಗೀಳಿಟ್ಟವು ಸುತ್ತಲಿನ ಜನಮನಗಳು
ಮನದಲ್ಲೆ ನಕ್ಕು ಮಾತಿಗಾಗಿ
ಅನುಕಂಪ ತೂರಿದವರೆಷ್ಟೊ…
ನನ್ನದಲ್ಲದ ವಸ್ತುಗಳಿಗೆ
ಬೆಲೆಕಟ್ಟಿ ಮುನಿದವರೆಷ್ಟೋ..!!

ಇವುಗಳ ಮಧ್ಯೆ ನನ್ನಲ್ಲಿ
ಎನೀಲ್ಲ ಎಂದರೊ ಮಡುಗಟ್ಟಿ
ಎದೆಯಾಳದಲಿ ಹುದುಗಿ
ಸಣ್ಣ ಸದ್ದು ಮಾಡುತ್ತಿತ್ತು “ನನ್ನತನ “
ದೇಹ ಮಾಗಿ ,ಬದುಕು ಬೆಂದರೂ
ಪರಿಪಕ್ವವಾಗಿ ನನ್ನೇ ಬಿಗಿದಪ್ಪಿ ಸಂತೈಸುತ

ಒಳಗಣ್ಣ ತೆರಸುತ ಭರವಸೆಯ
ಲೋಕಕ್ಕೆ ಲಗ್ಗೆ ಇಟ್ಟು
ಭಾವನೆಗಳ ಸಂಘರ್ಷಕೆ ಉದ್ವೇಗ ಗಳ
ಅರ್ತನಾದಕೆ ಮೌನ ಸವಿ ಸಾಗರವ
ಉಡುಗೂರೆ ನೀಡಿ ಜೀವನದ ಪ್ರೀತಿಯ
ಕಲಿಸಿ ಉತ್ಸಹಾದ ಬುಗ್ಗೆಯ ಹರಿಸಿತು
ಕಳೆದುಕೊಂಡಷ್ಟು ಬದುಕಿನಲ್ಲಿ
ಪಡೆಯುವದು ಅಗಾಧ ಬದ್ದತೆ
ಭರವಸೆಯ ಕಿರಣ ದೇದೀಪ್ಯಮಾನವಾಯಿತು ….

*******

 

About The Author

Leave a Reply

You cannot copy content of this page

Scroll to Top