ಶುಭಲಕ್ಷ್ಮಿ ಆರ್ ನಾಯಕ ಕವಿತೆ-ತಿಳಿಯದಾಗಿದೆ

ಯಾಕೆ ಕ್ರೌರ್ಯ ಯಾಕೆ ಕೊಲೆಯು
ತಿಳಿಯದಾಗಿದೆ
ಪ್ರೀತಿಯೊಳಗೆ ದ್ವೇಷ ಹೇಗೆ
ಅರಿಯದಾಗಿದೆ//೧//

ಮನವು ಕ್ಷೋಭೆಯಲ್ಲಿ ತುಂಬಿ
ಅರಿವು ಮಾಯವಾಗಿದೆ
ಎಲ್ಲ ದಕ್ಕಬೇಕು ಎಂಬ ಗೀಳು
ಹುಚ್ಚ ಹಿಡಿಸಿದೆ//೨//

ದಕ್ಕದಿರಲು ಕೋಪ ತಾಪ ಮನವ
ಸುಟ್ಟು ಹಾಕಿದೆ
ಭಯವು ಇರದೆ ಲಜ್ಜೆ ಬರದೆ
ಧಾರ್ಷ್ಟ್ಯವನ್ನು ಮೆರೆದಿದೆ//೩//

ತಪ್ಪು ಒಪ್ಪ ಕಂಡುಕೊಳುವ ದಾರಿ
ದೂರವಾಗಿದೆ
ಎಲ್ಲ ಸರಿಯೆ ಎಂಬ ಭಾವ ಮನಸಿನಲ್ಲಿ
ಕುಳಿತಿದೆ//೪//

ಗುರಿಯು ಇರದ ದುಷ್ಟ ಚಟಕೆ ಬುದ್ಧಿ
ಭ್ರಮಣೆಯಾಗಿದೆ
ಯೋಚನೆಯ ಮಾಡುವಂಥ ಮನಕೆ ಮಂಕು ಕವಿದಿದೆ//೫//

ಮುಂದೆ ಒದಗೋ ಕೇಡು ಕಂಗಳಿಗೆ
ಕಾಣದು
ಇಂದು ಬಿಸಿಯ ನೆತ್ತರಲ್ಲಿ ದೇಹ ತಂಪಾಗದು //೬//

ಬದುಕಲೆಮಗೆ ಏಕೆ ಬೇಕು ಕ್ರೌರ್ಯ ದ್ವೇಷ
ಮಚ್ಚರ
ಅತಿಯಾದರೆ ಅಮೃತವೂ ವಿಷವೆ ನಮಗೆ ಎಚ್ಚರ//೭//

ಸಾಕು ಮನುಜ ಸ್ವಾರ್ಥ ಭಾವ
ಬಯಸು ಎಲ್ಲರೊಳಿತನು
ದೇವ ಕೊಟ್ಟ ಬದುಕು ಇದುವೆ
ಬಿಟ್ಟು ಬದುಕು ಕೆಡುಕನು//೮//


3 thoughts on “ಶುಭಲಕ್ಷ್ಮಿ ಆರ್ ನಾಯಕ ಕವಿತೆ-ತಿಳಿಯದಾಗಿದೆ

Leave a Reply

Back To Top