ಡಾ.ಸರೋಜಿನಿ ಭಾಂಡಲಕರ- ಇರದಿರಲಿ ಹಸಿವು

ಕಾವ್ಯ ಸಂಗಾತಿ

ಡಾ.ಸರೋಜಿನಿ ಭಾಂಡಲಕರ

ಇರದಿರಲಿ ಹಸಿವು

ಹೊಟ್ಟೆ ತುಂಬುವಷ್ಟು ಊಟ
ಮನಸು ತುಂಬಿ ನಲಿದಾಟ
ಅತಿಯಾಗದಿರಲಿ ಯಾವುದು
ಮಿತಿಮೀರಿದಿರಲಿ ಕೆಲವೊಂದು

ನಾಳೆಬೇಕು ನಾಡಿದ್ದು ಬೇಕು
ಎಂಬ ದುರಾಸೆ ಬಿಡಬೇಕು
ಶರಣರ ಅಸಂಗ್ರಹ ನೀತಿ
ಅರಿತು ಹಚ್ಚಿ ಬಾಳಪ್ರಣತಿ

ಮಾತಿಲ್ಲದ ಮೂಕ ಪ್ರಾಣಿಗಳು
ಹಸಿವಿನಿಂದ ಬಳಲಿ ಗೋಳು
ಗೊಂಡೊಡೆ ಇರಲಿ ದಾನಗುಣ
ಕೊಂದು ತಿನ್ನದಿರಿ ಇರಲಿ ಕರುಣ

ಹಸಿವಿರಲಿ ಜ್ಞಾನದ ಇರದಿರಲಿ ವೈಭೋಗದಲಿ ವಿಲಾಸದಲಿ
ಇರದಿರಲಿ ಕಿತ್ತು ತಿನ್ನುವ ಹಸಿವು
ಮಿತಿಯಿರಬೇಕುಎಲ್ಲದರಲು ನಾವು ನೀವು
ಕಾಮಧೇನುವಿನ ಕಂದನ
ಕ್ಷೀರ ಕಸಿವ ಮನುಜನ
ಆಸೆ ಮಿತೀಯಲಿರಲಿ
ದುರಾಸೆಯ ಹಸಿವಿಲ್ಲದಿರಲಿ

—————————-

ಡಾ.ಸರೋಜಿನಿ ಭಾಂಡಲಕರ (ಜಾಧವ)

Leave a Reply

Back To Top