ನಾಗರತ್ನ ಎಚ್ ಗಂಗಾವತಿ.ಕರುಣೆಯ ಕಡಲು ಕನ್ನಡಮ್ಮನ ಒಡಲು

ಕಾವ್ಯ ಸಂಗಾತಿ

ನಾಗರತ್ನ ಎಚ್ ಗಂಗಾವತಿ.

ಕರುಣೆಯ ಕಡಲು

ಕನ್ನಡಮ್ಮನ ಒಡಲು

ಕರುಣೆಯ ಕಡಲು ಕನ್ನಡಮ್ಮನ ಒಡಲು
ಪ್ರೀತಿ ತುಂಬಿದ ಮಮತೆಯ ಮಡಿಲು .

ವಾಸ್ತುಶಿಲ್ಪಗಳ ಕಲೆಯಗೂಡು
ಕವಿ ಸಂತರು ನೆಲೆಸಿದ ಬೀಡು.

ಸುಂದರವಾಗಿ ಹರಿಯುವ ನದಿ ತೊರೆಗಳು
ಹಸಿರು ತುಂಬಿದ ಸುಂದರ ಕಾಡುಗಳು.

ಶ್ರೀ ಗಂಧದ ನಾಡು ಪುಣ್ಯದ ನೆಲವು
ನೋಡುಗರ ಕಣ್ಣಿಗೆ ಅದುವೇ ಚಲವು.

ಭವ್ಯ ಪರಂಪರೆ ಹೊಂದಿದ ನಾಡು
ನಿಸರ್ಗ ಸೌಂದರ್ಯ ತುಂಬಿದ ಮಲೆನಾಡು.

ಭಾಷೆಯು ಬೆಳೆಸಿದ ಎಲ್ಲರಲ್ಲಿ ಐಕ್ಯತೆಯು
ಹರಡಿದೆ ಜಗದಲಿ ಕನ್ನಡದ ಕೀರ್ತಿಯು.


ನಾಗರತ್ನ ಎಚ್ ಗಂಗಾವತಿ

Leave a Reply

Back To Top