ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನುಜನಾರ್ಧನ್ ನೆಟ್ಟಾರು

ದೀಪಾವಳಿ

ಹಚ್ಚಿಟ್ಟ ಒಲವ ಹಣತೆಗಳ ಸಾಲು
ಕಾಡುತ್ತಿದೆ ಎನ್ನದೆಯಾ ಭಾವಗಳ ಹೊನಲು
ಅನುರುಣಿಸಿ ಮೇಳೈಸಿ ಸಾಗುತಿದೆ ದೀಪ…..
ಪ್ರೇಮದ ತೈಲವೆರೆದು ಬೆಳಗುತಿದೆ ರೂಪ…..

ಬಾಲ್ಯದ ದಿನಗಳಲ್ಲಿ ಬೆಳಗಿಸಿದ ಹಣತೆ
ಅಮ್ಮನ ಪ್ರೇಮದಲಿ ಜಗವೆಲ್ಲ ಬೆಳಕೆ……
ಆ ಪುಟ್ಟ ಗುಡಿಸಲಲಿ ಸಿರಿವಂತ ಮನವು…
ಪ್ರೇಮದಭ್ಯಂಜನದಲಿ ತನುವೆಂತು ಸುಖವು..

ಅಂಧಕಾರದಲಿ ನೀನೆಂದೂ ಹುಣ್ಣಿಮೆ..
ಮೌಡ್ಯವ ತೊಲಗಿಸಲು ನೀ ಬರುವೆ ಮೆಲ್ಲನೆ
ಜಗದೊಲವು ಬೆಳಗಲಿ…. ಶೂನ್ಯತೆಯು ಸರಿಯಲಿ
ಅಗಮ್ಯ ಚೇತನವು ಶೃತಿಯಾಗಲಿ..

ಭ್ರಾತೃತ್ವ ಬೆಸೆಯಲಿ.. ತಾಮಸವು ಕಳಚಲಿ…
ಮನೆ ಮನವು ಬಾಡದ ಹೂವಾಗಲಿ
ಬಡತನದ ಬೇಗೆಯಲಿ.. ಸುಖದ ಸೊಗಡುಗಳಲ್ಲಿ..
ಸಾಮರಸ್ಯದ ಬೀಜ ಮೊಳೆಯುತಿರಲಿ…..

ಅನುಜನಾರ್ಧನ್ ನೆಟ್ಟಾರು

About The Author

Leave a Reply

You cannot copy content of this page

Scroll to Top