ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಮಾ. ಎಂ. ಜಮಾದಾರ

ನಂದಾದೀಪ.

ನಂದಿತೊಂದು ಜಾತ್ಯತೀತ ದೀಪ ನಭಕೆ ಬೆಳಕ ಬೀರಿ
ಕುಂದಿತೊಂದು ಅಗಾಧ ಶಕ್ತಿ ಜಗಕೆ ದಾರಿ ತೋರಿ
ನಂಬಿದವರ ಆಪತ್ಬಂಧು ನಡೆದರು ಪ್ರೀತಿಯ ತೂರಿ
ಅಳೆದು ತೂಗಿ ನೋಡಿದರೂ ಹೇಳಿದ್ದೆಲ್ಲವೂ ಸರಿ

ಬರಲಿಲ್ಲ ಮನದಲೆಂದೂ ಮೇಲುಕೀಳಿನ ಕಿಲುಬು
ಎಲ್ಲರ ಅಭ್ಯುದಯಕೆ ಹಗಲುರಾತ್ರಿಯ ಹಲುಬು
ಒಲವಿನ ಧವಳಗಿರಿ ಧೀಮಂತ ರೂಪವದು ಅಂದ
ಮೆಲುನಗೆಯ ಮೊಗದರಸನ ನೋಡುವುದೇ ಚೆಂದ

ಮಾತುಗಳಲೇ ಬದುಕುಗಳನು ಹದಗೊಳಿಸಿದ ದೇವ
ಮುಖ ನೋಡಿಯೇ ಅರಿವರು ಮನದಲ್ಲಿಯ ನೋವ
ಹುರಿದುಂಬಿಸುವ ಶಕುತಿಯಿಂದು ಮಾಯವಾಯಿತಲ್ಲ
ನಿನ್ನವರೆಂದು ಅಪ್ಪಿಕೊಂಡವರು ಅನಾಥರಾದರಲ್ಲ

ನಡೆದಾಡುವ ದೇವರಂತೆ ಎದೆಗಳಲಿ ನೆಲೆಸಿದಿರಿ
ಬದುಕು ಬೇಡವೆಂದವರಿಗೆ ಬದುಕಲು ಕಲಿಸಿದಿರಿ
ಅದೇನು ಅವಸರವಿತ್ತೋ ಎದ್ದು ನಡೆದಿರಲ್ಲಾ
ಮಾಡಲಿರುವ ಕೆಲಸಗಳನು ಮರೆತು ಹೋದಿರಲ್ಲಾ

ದಿ. ೭/೧೧/೨೦೧೩ ರಂದು ನಿಧನರಾದ ನಮ್ಮ ಭಾವನವರ ಬಗ್ಗೆ ಬರೆದ ಕವನ (ದಿ. ಎ. ಕೆ. ಜಮಾದಾರ ಯರಗಟ್ಟಿ.)


ಶಮಾ. ಎಂ. ಜಮಾದಾರ.

About The Author

Leave a Reply

You cannot copy content of this page

Scroll to Top