ಡಾ.ಕಸ್ತೂರಿ ದಳವಾಯಿ ಕವಿತೆ-ಇರದಿರಲಿ ಹಸಿವು

ಕಾವ್ಯ ಸಂಗಾತಿ

ಡಾ.ಕಸ್ತೂರಿ ದಳವಾಯಿ

ಇರದಿರಲಿ ಹಸಿವು.

ಎಲೆ?ಮಾನವ
ಬದುಕುವದಕ್ಕಾಗಿ
ತಿನ್ನು.ತಿನ್ನುವದಕ್ಕಾಗಿ
ಬದುಕಬೇಡಾ
ಹಸಿವು ಎಲ್ಲ
ಜೀವಜಾಲದ
ಸೋತ್ತು
ನಿಸರ್ಗ ನಿಯಮು
ಹಸಿವಿನ ಆಹಾರ
ಸರಪಳಿ ನಿಯಮ
ನನಗೂ ಗೊತ್ತು
ನಿನಗೂ ಗೊತ್ತು
ಯಾವಾಗಲೂ
ದೊಡ್ಡ ಜೀವಿ
ಸಣ್ಣ ಜೀವಿ
ಕೊಂದು
ಬದುಕಿದ್ದು.
ಹಾಗಂತ ಹಸಿವಿಗೆ


ಜೀವಿಗಳನೆಲ್ಲಾ
ಕೊಂದು ಹಾಕದಿರು
ಎಲೆ?ಮಾನವ
ಅಕ್ಕ ಸಂದೇಶ
ಕಲ್ಯಾಣದ ದಿ
ನಡೆಯುವಾಗ
ಜಲಗಾರ ಮನ
ಪರಿವರ್ತನೆ ಮಾಡಿಲ್ಲವೆ


ಹಾಗೆ.
ಒಂದು ತಿಂದ ಹಸಿವಿಗೆ
ಕರಗಿಸಲುಆರು
ಕಿಲೋಮಿಟರಗಳು
ನಡೆದರ.ಅದೇ ಹಸಿವಿಗೆ
ಅನ್ನ ಅರಸಿ ಆರು ಕೀಲೋ
ಮೀಟರ್ ನಮ್ಮ ಜನಗಳು
ನಡೆಯುವರು
ಯೋಚಿಸು.ಅನ್ನಂ ಪರಬ್ರಹ್ಮಂನೆಂದಿರುವ ನಮ್ಮಶರಣರು!ಅದಕೆ ನಿನಗೆ ಹಸಿವೆಂಬ ಹೆಬ್ಬಾವು ಬಸಿರ ಬಡಿದೂಡೆ.ನೀ. ನೀ.ನೂರಾರು ಸಲ ಯೋಚನೆ ಮಾಡು ಹಸಿವು ಇರದಿರಲಿ. ಮಾನವಾ.


ಡಾ.ಕಸ್ತೂರಿ ದಳವಾಯಿ

One thought on “ಡಾ.ಕಸ್ತೂರಿ ದಳವಾಯಿ ಕವಿತೆ-ಇರದಿರಲಿ ಹಸಿವು

  1. ಆಧುನಿಕ ಕಾಲದಲ್ಲಿ ಮನುಷ್ಯನ ಸ್ವಾರ್ಥ ಬಿಂಬಿಸುವ ಎಚ್ಚರಿಕೆ ನೀಡುವಕವಿತೆಇದು.
    ಬದುಕಲು ಬೇಕಾಗುವಷ್ಟು ತಿನ್ನು.ತಿನ್ನುವದಕ್ಕಾಗಿ ಬದುಕಬೇಡ ಎಂದು ಖಡಕ್ ಆಗಿ ನೀಡಿದ ಎಚ್ಚರಿಕೆಯಾಗಿದೆ. ಹಸಿವು ಹೆಬ್ಬಾವು ಬಸಿರ ಬಡಿವ ಪರಿ ಮಾರ್ಮಿಕವಾಗಿದೆ.ಕವಿತೆಯ ಒಳಹೊಕ್ಕು ನೋಡಿದಾಗ ಓದುಗರಿಗೆ ಸಂದೇಶದೊಂದಿಗೆ ವಾಸ್ತವದ ಅರಿವು ಮೂಡಿಸುತ್ತದೆ.ಇಂತಹ ಕವಿತೆ ನೀಡಿದ ತಮಗೆ ತುಂಬಾ ಧನ್ಯವಾದಗಳು ಮೇಡಂ.
    ಸರೋಜಾ ಜಾಧವ

Leave a Reply

Back To Top