ವಿಮಲಾರುಣ ಪಡ್ಡoಬೈಲ್-ಬೆಳಗಲಿ ಕನ್ನಡ

ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲ್-

ಬೆಳಗಲಿ ಕನ್ನಡ

ಹಸುರು ಕನ್ನಡ ಉಸಿರು ಕನ್ನಡ
ಹೃದಯದಿ ಕನ್ನಡವ ನುಡಿಸುತ್ತಾ
ಕನ್ನಡಾಂಬೆಯ ಮುಡಿಯಲ್ಲಿ ಅರಳಿರಲು ಕನ್ನಡ
ಅನ್ಯಭಾಷೆಗೆ ಬಾಡದಿರಲಿ ಕನ್ನಡ
ಜಿಹ್ವೆಯ ಬಲದೊಳಗೆ ಸಿರಿಗನ್ನಡ.

ಸಪ್ತಸಾಗರದ ಒಡಲಲ್ಲಿ
ಸಹಸ್ರ ನದಿಗಳ ಮಿಲನವಿದೆ
ಬಾಂಧವ್ಯದ ಬೆಸುಗೆಯ ದಾಹ ನೀಗಿಸಲು
ಅಮೃತವಾ ನೀಡುತಿಹಳು
ತಾಯಿ ಕನ್ನಡಾಂಬೆ .

ಕವಿ ಪುಂಗವರ ಒಡಲಿನಲ್ಲಿ ಸೃಷ್ಟಿಸಿ
ಬೇಕು ಬೇಗುದಿಗಳ ಅರಿವು ಮೂಡಿಸಿ
ಕನ್ನಡ ನೆಲದಲ್ಲಿ ಕನ್ನಡದ ಉಳಿವಿಗೆ
ಜ್ಞಾನಜ್ಯೋತಿಯ ಬೆಳಕ ಸಾರುತ
ಕನ್ನಡದ ಕೀರ್ತಿಯ ಬೆಳಗುತಿಹಳು ನನ್ನಬ್ಬೆ.

ಜಾತಿ ಮತ ಪಂಥ ಮೆಟ್ಟಿನಿಂತು
ವಿವಿಧತೆಯಲ್ಲಿ ಏಕತೆಯ ಸಾರುವ
ಕನ್ನಡದ ಮಣ್ಣಲ್ಲಿ ಕನ್ನಡಿಗರಾಗಿ
ಸಹಬಾಳ್ವೆಯ ಹಾದಿಗೆ
ಮುನ್ನುಡಿ ಬರೆದಿಹಳು ಕನ್ನಡಾಂಬೆ.

ರಾಜ್ಯೋತ್ಸವದ ನಾಡ ಹಬ್ಬದಿ
ಕವಿವಾಣಿಯಲ್ಲಿ ಮೊಳಗುತ್ತಿಹುದು
ಸಂಪನ್ನ ಭಾಷೆ ವಿನೀತವಾಗಿ
ನಡೆ ನುಡಿಯಲಿ ಪ್ರಜ್ವಲಿಸಲಿ
ಕನ್ನಡ ಕನ್ನಡ ಕನ್ನಡ ಸಿರಿಗನ್ನಡ…


ವಿಮಲಾರುಣ ಪಡ್ಡoಬೈಲ್

Leave a Reply

Back To Top