ಶಂಕರಾನಂದ ಹೆಬ್ಬಾಳ-ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ-

ಗಜಲ್

ಬತ್ತಿದ ಕೆರೆಯಾಯಿತು ನೀ ಕೊಟ್ಟ ಪ್ರೀತಿ
ಬಾಡಿದ ಕುಸುಮಾಯಿತು ನೀ ಕೊಟ್ಟಪ್ರೀತಿ

ಕನಸಿನ ಗಾಜಿನರಮನೆ ಒಡೆದು ಹೋಯಿತೇ
ಮುರಿದ ಸಂಕವಾಯಿತು ನೀ ಕೊಟ್ಟ ಪ್ರೀತಿ

ತಾಳಲಾರದ ತಳಮಳವ ಒಡಲಲಿ ತಂದಿಟ್ಟೆ
ಚೆಲ್ಲಿದ ಕ್ಷೀರವಾಯಿತು ನೀ ಕೊಟ್ಟ ಪ್ರೀತಿ

ಹೃದಯದಲಿ ಪೀಠವಿಟ್ಟು ಪೂಜಿಸಿದ್ದೆ ಸಖ
ಸಾಗರದ ಜಲವಾಯಿತು ನೀ ಕೊಟ್ಟ ಪ್ರೀತಿ

ಒಳಗಿನ ದುಃಖವಿದು ಅಭಿನವನನು ಕಾಡೀತು
ಕಹಿಯಾದ ಖಾದ್ಯವಾಯಿತು ನೀ ಕೊಟ್ಟ ಪ್ರೀತಿ


ಶಂಕರಾನಂದ ಹೆಬ್ಬಾಳ

Leave a Reply

Back To Top