ಅನುಪಮಾ ಎ ರಾವ್ , ತೋಕೂರು-ಎರಡು ಕಿರುಕವಿತೆಗಳು

ಕಾವ್ಯ ಸಂಗಾತಿ

ಅನುಪಮಾ ಎ ರಾವ್ , ತೋಕೂರು

ಎರಡು ಕಿರುಕವಿತೆಗಳು

ನೆಮ್ಮದಿ

ಓದಲು ಹೊರಟೆ ಬದುಕೆಂಬ ಹೊತ್ತಗೆ
ಸಿಕ್ಕಿ ಹೊರಳಾಡಿದೆ
ಭವ ಬಂಧಗಳ ಒಳಗೆ
ನೆಮ್ಮದಿಯ ಕಾಣಲು
ಅಲೆದೆ ಒಳಗೆ ಹೊರಗೆ
ಹೋರಾಟದ ಮಧ್ಯೆ ಮರೆತೆ
ನೋಡಲು ನನ್ನೊಳಗೆ
ಸಿಗಬಹುದೇ ನೆಮ್ಮದಿ
ನನ್ನೊಳಗಿಹ ದೇವನ
ಕಾಣದ ನನಗೆ!

****

ಸಾಧನೆ

ಬಲಿಯಾಗ ಬೇಡ
ಬದುಕಿನ ಸುಳಿಗೆ ಸಿಲುಕಿ
ಬದಲಿಗೆ ನೀನೇ
ಸುಳಿಯಾಗು
ತಿರುಗಿ ತಿರುಗಿ
ಎಲ್ಲವನು ಸೆಳೆ
ನಿನ್ನೆಡೆಗೆ ವೇಗವಾಗಿ
ಸಾಧನೆಯ ಗರಿ
ಮುಡಿಗೇರಲಿ ಪ್ರತಿಯಾಗಿ
ಮಿಂಚಿ ಮರೆಯಾಗು
ಎಲ್ಲರ ನೆನಪಲ್ಲುಳಿಯುವ
ಕಾಲವಾಗಿ


ಅನುಪಮಾ ಎ ರಾವ್ , ತೋಕೂರು

Leave a Reply

Back To Top