ಅನುರಾಧಾ ರಾಜೀವ್ ಸುರತ್ಕಲ್-ಸೌಂದರ್ಯ

ಕಾವ್ಯಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಸೌಂದರ್ಯ

  ಅರ ಕಣ್ಣಲಿ ದುಗುಡ ಏತಕೆ
ನಗುವ ಬೀರೇ ಸುಂದರಿ
ಬಿರು‌ಸು ನೋಟದಿ ಮುನಿಸ ತೊರೆದು
ಒಲುಮೆ ತೋರೇ ಕಿನ್ನರಿ

ಕುರುಳ ರಾಶಿಯು ಮೊಗವ ಚುಂಬಿಸಿ
ಬಳಿಗೆ ನಲ್ಲನ ಕರೆದಿದೆ
ಹೆರಳ ತುಂಬಾ ಮುಡಿದ ಮಲ್ಲಿಗೆ
ಮನದಿ ಘಮವ ಹರಡಿದೆ

ಹಣೆಯ ಮೇಲಣ ಕೆಂಪು ತಿಲಕ
ಚೆಲುವೆ ನೀನು ಎಂದಿದೆ
ಕುಣಿವ ಜುಮುಕಿಯು ದುಮುಕಿ ಕಿವಿಯಲಿ
ಪಿಸು ಮಾತನು ಆಡಿದೆ

ಹೊಳೆವ ಮುತ್ತಿನ ಮೂಗುತಿ ಕೂಡಾ
ಸೊಬಗ ನಾಸಿಕ ಕಂಡಿದೆ
ಸೆಳೆದು ಮೋಹಕ ಹವಳದ ಬಣ್ಣದಿ
ಅಧರವನ್ನು ತೀಡಿದೆ


ಅನುರಾಧಾ ರಾಜೀವ್ ಸುರತ್ಕಲ್

Leave a Reply

Back To Top