ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್

ಒಡಲ ಕಿಚ್ಚಿಗೆ ಕರುಳು ಮೌನದಲಿ ಉರಿಯುತಿದೆ ಸಖಿ
ವಿಧಿಯ ನಗೆಗೆ ಹೃದಯ ನೋವಿನಲಿ ಬಿರಿಯುತಿದೆ ಸಖಿ

ಕಾಳರಾತ್ರಿಯು ಕರಗಬಾರದೇ ಮಂಜು ಹನಿಗಳಲಿ ಇಂದು
ಹೊರಳಿ ಮರಳಿದ ಇರುಳು ಅಣಕಿಸುತಲಿ ಸುರಿಯುತಿದೆ ಸಖಿ

ಕಂಗಳ ಅಂಚಿನಲಿ ಕಂಬನಿ ಮಡುಗಟ್ಟಿದೆ ಇಳಿಯದೆ ನೋಡು
ಬವಣೆಗೆ ಸೋತ ಬದುಕು ದುಗುಡದಲಿ ಜರಿಯುತಿದೆ ಸಖಿ

ಭಾರವಾಗಿದೆ ಮನವು ನಂಜು ತುಂಬಿದ ಜಗದ ನಡೆಗೆ
ನಂಬುಗೆಯ ಝರಿಯು ಪ್ರೀತಿ ಅರಸುತಲಿ ಹರಿಯುತಿದೆ ಸಖಿ

ಭಾವಗಳೆಲ್ಲ ಮುರುಟಿ ಒಣಗಿ ತರಗಾಗಿ ಹೋಗಿವೆ ಬೇಗಂ
ಮುಗಿಯದ ದುಮ್ಮಾನದಿ ಸಮಯ ತೆವಳುತಲಿ ಸರಿಯುತಿದೆ ಸಖಿ


ಹಮೀದಾ ಬೇಗಂ ದೇಸಾಯಿ

About The Author

Leave a Reply

You cannot copy content of this page

Scroll to Top