ಸುಲೋಚನಾ ಮಾಲಿಪಾಟೀಲ-ಮತ್ತೆ ಹುಟ್ಟಿ ಬನ್ನಿ

ಕಾವ್ಯ ಸಂಗಾತಿ

ಸುಲೋಚನಾ ಮಾಲಿಪಾಟೀಲ

ಮತ್ತೆ ಹುಟ್ಟಿ ಬನ್ನಿ

ಆಧುನಿಕ ಜೀವನದ ನಡೆಯಲ್ಲಿ
ಮತ್ತೆ ಅದೇ ಧುಳೆಬ್ಬಿಸಿ ಕುಣಿವಲ್ಲಿ
ನಮ್ಮ ಸಂಸ್ಕೃತಿಯ ಮರೆಮಾಚುತ
ಕಾರ್ಗತ್ತಲಿನ ಮಡುವು ಹರಿಡಿಸಿಹಿರಿಲ್ಲಿ

ಅಷ್ಟಮದಂಗಳು ಕೆಕೆ ಹಾಕುವ ಲೋಕ
ಯಾರಿಗೆ ಬೇಕಾಗಿದೆ ಇಂತಹ ನರಕ
ಮೂರ್ಖರ ದುರಾಡಳಿತ ನಡೆಯಲ್ಲಿ
ಇದ್ದು ಸತ್ತಂತಿರುವ ಮನುಜನ ಬದುಕ

ಮತ್ತೆ ಹುಟ್ಟಿ ಬನ್ನಿ ಮಹಾತ್ಮರೆ
ಜಗದ ವಿಷವ ತೊಳೆಯುವ ಕರೆ
ಬುದ್ಧ ಬಸವ ದಾಸ ಸಂತರನ್ನು
ಮರಳಿ ಕಾಣಲು ಸಾಧ್ಯ ಮನುಜರೆ

ಹುಡುಕಿ ನಿಮ್ಮ ಅಂತರಾತ್ಮದಲಿ
ನೆನೆಯಿರಿ ನಿಮ್ಮ ಪ್ರತಿ ಉಸಿರಿನಲಿ
ಆ ಪುಣ್ಯಕುಲದ ಮಹಾಂತರನ್ನು
ನೆಮ್ಮದಿಯ ಜೀವನ ಕರುಣಿಸಿದವರಿಲ್ಲಿ


ಸುಲೋಚನಾ ಮಾಲಿಪಾಟೀಲ.

Leave a Reply

Back To Top