ಡಾ,ಶಶಿಕಾಂತ.ಪಟ್ಟಣ ಪುಣೆ, ಗೌರಿಲಂಕೇಶ ನೆನಪಿಗೆ ಒಂದು ಕವಿತೆ ಬಾರದ ಊರಿಗೆ ಹೋದಳು

ಕಾವ್ಯಸಂಗಾತಿ

ಡಾ,ಶಶಿಕಾಂತ.ಪಟ್ಟಣ ಪುಣೆ,

ಗೌರಿಲಂಕೇಶ ನೆನಪಿಗೆ ಒಂದು ಕವಿತೆ

ಬಾರದ ಊರಿಗೆ ಹೋದಳು

ಬಾರದ ಊರಿಗೆ
ಹೋದಳು ಗೌರಿ.
ಸತ್ಯ ಸಂಘರ್ಷಕೆ
ಹೆಸರಾದಳು ನಾರಿ
ಅದಮ್ಯ ಪ್ರೀತಿ
ಮುಗ್ದ ಮನ ಪೋರಿ
ಕೋಮುವಾದಿಗಳಗೆ
ಇವಳು ಮಹಾಮಾರಿ
ಲೇಖನಿ ತಿವಿತ
ಹೋರಾಟವು ಭಾರಿ
ಕೊಲೆಗಡುಕರ
ಗುಂಡಿಗೆ ಬಿದ್ದಳು ಜಾರಿ
ಇಲ್ಲಿಲ್ಲ ಇಲ್ಲಿಲ್ಲ
ಕನ್ನಡದ ಕುವರಿ
ಬಾರದ ಊರಿಗೆ
ಹೋದಳು ಗೌರಿ
ಬಡವಾಯಿತು ಚಿಂತನೆ

ನಿಮಗೆಲ್ಲ ಸಾರಿ.


ಡಾ,ಶಶಿಕಾಂತ.ಪಟ್ಟಣ ಪುಣೆ

6 thoughts on “ಡಾ,ಶಶಿಕಾಂತ.ಪಟ್ಟಣ ಪುಣೆ, ಗೌರಿಲಂಕೇಶ ನೆನಪಿಗೆ ಒಂದು ಕವಿತೆ ಬಾರದ ಊರಿಗೆ ಹೋದಳು

  1. ಬಾರದ ಊರಿಗೆ ಹೋದಳು… ಕವನದ ಮೂಲಕ ಗೌರಿ ಲಂಕೇಶ್ ಅವರಿಗೆ ನಿಜವಾದ ಶ್ರದ್ದಾಂಜಲಿಯನ್ನು ಅರ್ಪಿಸಿದ್ದೀರಿ ಸರ್

  2. ಭಾರದ ಊರಿಗೆ ಹೋದರು ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ನಿಂತಳು ಗೌರಿ……….

  3. ಅತ್ಯುತ್ತಮ ಕವನ ಗೌರಿ ಅಕ್ಕನಿಗೆ ಲಾಲ್ ಸಲಾಂ

Leave a Reply

Back To Top