ಶ್ಯಾಮ್ ಪ್ರಸಾದ್ ಭಟ್.ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ

ಕಾವ್ಯಸಂಗಾತಿ

ಶ್ಯಾಮ್ ಪ್ರಸಾದ್ ಭಟ್.

ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ

ಭಾಮಿನೀ ಷಟ್ಪದಿಯಲ್ಲಿ

ಇಳೆಯ ಕೊಂಡಿಯ ಕಳಚಿ ಹಾರುತ/
ಹಲವು ದಿನಗಳ ಪಯಣ ಮುಗಿಸಿದ/
ಬಳಲಿಕೆಯತಾ ಮರೆತು ಬಿಟ್ಟನು ಧೀರ ವಿಕ್ರಮನು/
ಗುಳಿಗಳಿಲ್ಲದ ಜಾಗ ಗುರುತಿಸಿ/
ಚಲನೆ ವೇಗವ ಕಡಿತ ಗೊಳಿಸಿದ/
ಗೆಲುವ ನಗೆಯನು ಬೀರಿ ಗೈದನು *ಪಾದಸ್ವರ್ಶವನು/

ಖನಿಜ,ನೀರಿನ ಬಗೆಗೆ ಮಾಹಿತಿ/
ಮನುಜ ಲೋಕದ ಕಡೆಗೆ ಕಳುಹಿಸಿ/
ಮನನ ಮಾಡಲು ನೆರವು ನೀಡುವ ಬಯಕೆಯುಳ್ಳವನು/
ಕನಕ,ಕಬ್ಬಿಣದದಿರ ಜೊತೆಜಲ/
ಜನಕವಿಹುದೋ ತಿಳಿಯಬೇಕಿದೆ/
ಕನಸ ಕೆದಕುವ ಕೆಲಸ ಮಾಡುವ ಹೊರೆಯ ಹೊತ್ತವನು/


ಶ್ಯಾಮ್ ಪ್ರಸಾದ್ ಭಟ್.

Leave a Reply

Back To Top