ವಚನಶ್ರೀ ಶಿವಕುಮಾರ ಪಾಟೀಲ ಕವಿತೆ

ವಚನಶ್ರೀ ಶಿವಕುಮಾರ ಪಾಟೀಲ

ಜನರಿಗಾಗಿ

ಬ್ರಿಟಿಷ್ ರಕ್ಕಸರ
ಕೈಯಲ್ಲಿ ಸೋತು ಸತ್ತು
ಹೋಗಿದ್ದವು ಮನಗಳು
ಸಹಿಸಲಾರದೆ ಸಿಡಿದ್ದೆದವು
ಬೆಂಕಿ ಚೆಂಡಿನಂತ ಮನಗಳು
ಹೋರಾಟಗಳು
ಉಪವಾಸಗಳು
ಸರೆವಾಸಗಳು
ಬೆಂಕಿಯ ಜ್ವಾಲೆಯಂತೆ ಸಿಡಿದ್ದೆದ್ದು
ತ್ಯಾಗ ಬಲಿದಾನದಿಂದ
ಅಮೃತದಂತ
ಸ್ವಾತಂತ್ರ್ಯವನ್ನ ತಂದು ಕೊಟ್ಟರು
ನಮ್ಮ ಹಿರಿಯರು

ನಮಗೀಗ ಅದರ
ಪರಿವೆ ಇಲ್ಲ
ಅಂಗಳದಲ್ಲಾಡುವ ಎಳೆಯ ಕಂದಮ್ಮಗಳಿಗೂ
ಸ್ವಾತಂತ್ರ್ಯವಿಲ್ಲ

ಎಲ್ಲೆಲ್ಲು ರಕ್ಕಸ ಮನಗಳ
ವಿಕೃತ
ಕಾಮುಕರು.
ಹಾವು ಮುಂಗುಸಿಯಂತ ಕಚ್ಚಾಡುವ
ರಾಜಕಾರಣಿಗಳ ನಾಟಕಗಳು

ನಮಗಾಗಿ ಮಡಿದವರಿಗೆ ಇರಲಿ
ಜನರಿಗಾಗಿ ಮನಮಿಡಿಯುವ ಕಾಯಕಗಳು


One thought on “ವಚನಶ್ರೀ ಶಿವಕುಮಾರ ಪಾಟೀಲ ಕವಿತೆ

Leave a Reply

Back To Top