ಡಾ ಶಶಿಕಾಂತ ಪಟ್ಟಣ ರಾಮದುರ್ಗಕನ್ನಡಿಗರ ಹೃನ್ಮನ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕನ್ನಡಿಗರ ಹೃನ್ಮನ

ಕುವೆಂಪು ನೀವು ಬರೆದಿರಿ ಕನ್ನಡದೀ
ಇಪ್ಪತ್ತಮೂರು ಕವನ ಸಂಕಲನ
ಮೆರೆದಾಡಿದವು ಕಬ್ಬಿಗರ
ಸಾಹಿತ್ಯದಂಕಣ
ಕೊಳಲು ನುಡಿಸಿದಿರಿ
ಮೊಳಗಿತು ಕನ್ನಡದ
ಪಾಂಚಜನ್ಯ ಪಕ್ಷಿಕಾಶಿ
ಕುಣಿಯಿತು ಶಬ್ದ ದರ್ಪಣದಿ
ನವಿಲು ಕಲಾಸುಂದರಿ
ನುಡಿದವು ಕಥನ ಕವನಗಳು
ಪಕ್ಷಿ ಇಂಚರ ದಾಟಿತು
ಕೋಗಿಲೆ ಮತ್ತು ಸೋವಿಯಟ್ ರಷ್ಯಾ
ಅದೆಷ್ಟು ನೋವು ಅಪಮಾನ
ಅಗ್ನಿಹಂಸ ಬೆದರಲಿಲ್ಲ
ಮೌನದಲಿ ಅರಳಿದವು
ಕೃತ್ತಿಕೆ ಕಿಂಕಿಣಿ.
ಅವಳ ಚೆಲುವು ಷೋಡಶಿ
ಕರೆದಳು ಭಾವ
ಚಂದ್ರಮಂಚಕೆ ಬಾ ಚಕೋರಿ
ಒಳಗೊಳಗೇ ಕೊರೆದ ಅನುಭಾವ
ಇಕ್ಷುಗಂಗೋತ್ರಿ ಜ್ಞಾನ ನಿಧಿ
ಮನೆ ಬಿಟ್ಟು ಹೋರಾಟ
ದಿವ್ಯ ಚೇತನ ಅನಿಕೇತನ
ಮನಸು ಜೇನಾಗುವ ಕ್ಷಣ
ಮೌನ ಅನುತ್ತರಾ
ಸರಳತೆಯಲಿ ಮದುವೆ
ಮಂತ್ರಾಕ್ಷತೆ
ಗಟ್ಟಿ ಗೊಂಡಿರಿ ಕದರಡಕೆ
ಹೆದರಲಿಲ್ಲ ಪ್ರೇತಕ್ಯೂ
ತೋರಿದಿರಿ ಕುಟೀಚಕ
ಮಸುಕು ಹರಿದ
ಹೊನ್ನ ಹೊತ್ತಾರೆ
ಇಳುವಿದಿರಿ ಭಾವ ಭಾರ
ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ
ನಿಮಗಿದೋ ನನ್ನ ನಮನ ಕುವೆಂಪು ಕನ್ನಡಿಗರ ಹೃನ್ಮನ

ಕವಿ ಶ್ರೇಷ್ಠ ಕುವೆಂಪುರವರ 23 ಕವನ ಸಂಕಲನಗಳನೊಳಗೊಂಡ ನನ್ನ ಕವನ ಅವರ ಶ್ರೀಚೆತನಕ್ಕೆ ನಮನ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

21 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗಕನ್ನಡಿಗರ ಹೃನ್ಮನ

  1. ಕುವೆಂಪುರವರ ಎಲ್ಲಾ ಕವನ ಸಂಕಲನ ನಿಮ್ಮ ಕವನದಲ್ಲಿ ಮೂಡಿವೆ ಇದು ಸುಂದರ ನುಡಿ ನಮನ

  2. ಕನ್ನಡದ ಮೇರು ಕವಿಗೆ ಅರ್ಥ ಪೂರ್ಣ ನುಡಿ ನಮನ

  3. ಎಂತಹ ಅದ್ಭುತ ಭಾವ ಪ್ರಯತ್ನ ನಿಮ್ಮದು ಅರ್ಥಪೂರ್ಣ ಕವನ

  4. ಅತ್ಯಂತ ಸುಂದರ ಸರಳ ಮತ್ತು ಅರ್ಥಪೂರ್ಣ ಕವನ

  5. ಕುವೆಂಪುರವರ. ಕುರಿತು ನೀವು ಬರೆದ. ಕವನಗಳು ಯಾವಾಗಲೂ ತುಂಬಾ ಚೆನ್ನಾಗಿರುತ್ತವೆ ,ಮತ್ತೆ ಮತ್ತೆ ಆ. ಸಾಲುಗಳು ,ಪದಗಳನ್ನು ಓದಬೇಕು ಎನಿಸುವಂತೆ ,

  6. ಕುವೆಂಪು ಅವರ ಕವನಗಳನ್ನು ಸೊಗಸಾಗಿ
    ಹೊಂದಿಸುತ್ತಾ… ಸರಳವಾಗಿ ಸುಂದರವಾಗಿ
    ಝರಿಯಂತೆ ಜುಳು ಜುಳು ಹರಿಯುತ್ತ ಮೂಡಿ ನಿಂತ ನಿಮ್ಮ ಈ ಕವನ ಎಲ್ಲರ ಮನವನ್ನು ಅಪ್ಯಾಯತೆಯಿಂದ ತಲುಪಿದೆ… ಸರ್
    ಶ್ರೀಚೇತನಕ್ಕೆ ನಿಜವಾದ ನಮನ..

  7. ಒಂದಕ್ಕೊಂದು ಜೋಡಣೆಯಾದ ಭಾವ ಬಂಧ ಕುವೆಂಪುರವರ ಕವನ ಸಂಕಲನಗಳನ್ನು ಇಷ್ಟೊಂದು ಚೆನ್ನಾಗಿ ಕಟ್ಟಿಕೊಟ್ಟಿರುವಿರಿ ಧನ್ಯವಾದಗಳು ಸರ್

Leave a Reply

Back To Top