ಹನಿಬಿಂದು ಕವಿತೆ-ಉಪ್ಪಿಟ್ಟು

ಕಾವ್ಯ ಸಂಗಾತಿ

ಹನಿಬಿಂದು

ಉಪ್ಪಿಟ್ಟು

ಯಾರದು ಏನೇ ಹೆಸರನು ಪಡೆಯಲಿ
ಕಾಲವು ಆಂಗ್ಲರ ಜತೆಗೇ ಓಡಲಿ
ಹೆಸರನು ಬದಲಿಸೆ, ಕನ್ನಡದವನಾಗಿ ಉಳಿದಿಹೆ
ಉಪ್ಪಿಟ್ಟು ಎನುವರು ಎನ್ನ!
ಸಜ್ಜಿಗೆ ಕರಾವಳಿಯಲಿ ನಾ..

ಈರುಳ್ಳಿ ಬೆಳ್ಳುಳ್ಳಿ ಇದ್ದರು ಸರಿಯೇ
ಕೆಲವೆಡೆ ಇಲ್ಲದದೆ ಇದ್ದರೂ ಖುಷಿಯೇ
ರವೆಯನು ಚೆನ್ನಾಗಿ ನೀ ಹುರಿಯೇ!
ಉಪ್ಪು ಮೆಣಸು ರುಚಿಗೆ ಎಣೆಯೇ!

ಸರ್ವ ಕಾಲದ ಬಡವರ ಬಂಧು
ಉಪವಾಸಕ್ಕೂ ನಾನೇ ಸಿಂಧು
ತಿನುವಿರಿ ನನ್ನ ಬೇಗನೆ ಮಿಂದು
ಬಿಸಿ ಬಿಸಿ ಸವಿಯಲು ಎಲ್ಲರು ಮುಂದು

ಸಣ್ಣಗೆ ಉರಿಯಲು ಬೇಯುವೆನು
ಬೇಗನೆ ಆಗುವ ತಿಂಡಿಯು ನಾನು
ರೋಗಿಗೂ ಯೋಗಿಗೂ ಹೊಟ್ಟೆಯ ತಣಿಸಲು
ಭೋಗ ಭಾಗ್ಯಕೆ ನಮಿಸುವ ಪರಿಯೊಳು


ಹನಿಬಿಂದು

Leave a Reply

Back To Top