ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಮುನಿಸು
ಎಲ್ಲರನ್ನು ಅಕ್ಕರೆಯಲಿ
ಪೊರೆವ ನಿನಗೆ ಮಲ್ಲಿಗೆ
ಕಂಡರೆ ಮುನಿಸೇಕೊ…?
ಯಾರಿಗೂ ಕೇಡ ಬಯಸದ
ಮೃದು ಮನದ ಮಲ್ಲಿಗೆ
ಕಂಡರೆ ಮುನಿಸೇಕೋ…..?
ಯಾರು ನಿನಗೆ ಸಲ್ಲದ
ಮಾತು ಹೇಳಿ ಮಲ್ಲಿಗೆಯ
ಮೇಲೆ ಮುನಿಸ ತಂದವರು…
ಸ್ನೇಹ ಪ್ರೀತಿ ತಾನಾಗೇ
ಅರಳಿ ಪರಿಮಳಿಸಿದೆ..
ಕೊರಳೇಕೆ ಕೊಯ್ಯುವೆ..
ಬಿರಿದರಳುವ ಮುನ್ನವೇ
ತರಿದೊಗೆಯುವ
ಹವಣಿಕೆ ಏಕೆ ನಿನಗೆ….
ಕರುಣೆ ಕನಿಕರ ಸಹಿಸದು
ಪ್ರೀತಿ ಸ್ನೇಹ ನೆರಳನು
ಬಯಸಿ ಬಳಿ ಬಂದಿದೆ
ದೂರ ತಳ್ಳುತಿಹೆ ಏಕೆ
ನೀನರಳಿಸಿದ ಭಾವ ಮಲ್ಲಿಗೆ…
ನೀಡಬೇಡ ನೋವು….
ತಾಳಲಾರದು ಹೂವು..
ಉಸಿರಿಲ್ಲದೆ ಅಸುನೀಗುವುದು..
ಒಪ್ಪಿಗೆಯೇ ನಿನಗಿದು…
ಇಂದಿರಾ ಮೋಟೆಬೆನ್ನೂರ.
ಮಲ್ಲಿಗೆಯ ಕಂಪಿನಷ್ಟೇ ಆಹ್ಲಾದಕರವಾಗಿದೆ ಈ ಕವನ
ಸವಿ ಸ್ಪಂದನೆಗೆ ವಂದನೆಗಳು…