ಲಲಿತಾ ಮು. ಹಿರೇಮಠ ಕವಿತೆ-ಆಶಾಕಿರಣ

ಕಾವ್ಯ ಸಂಗಾತಿ

ಲಲಿತಾ ಮು. ಹಿರೇಮಠ ಕವಿತೆ-

ಆಶಾಕಿರಣ

ನಿನ್ನ ಹೃದಯ ನನ್ನ ಪ್ರೀತಿಗಾಗಿ
ಎಂದಾದರೂ ಮಿಡಿಯಬಹುದೆ.
ಬೇಡವಾದ ಕಷ್ಟಗಳಿಗೆ
ನಾನು ಕೊನೆಯ ಹೇಳಬಹುದೆ.

ಕಮರಿ ಹೋದ ಕನಸುಗಳಿಗೆ
ಮತ್ತೆ ಬಣ್ಣ ತುಂಬಬಹುದೆ.
ಕರಗಿ ಹೋದ ಸುಖವ ಮತ್ತೆ
ಕಾಣಬಹುದೇ ಬದುಕ ದಾರಿಗೆ.

ಚದುರಿಹೋದ ಬಯಕೆಗಳಿಗೆ
ಮತ್ತೆ ಜೀವ ತುಂಬಬಹುದೆ.
ಬಾಡಿಹೋದ ಬಳ್ಳಿಗಿಲ್ಲಿ
ನೀರ ಸೆಲೆಯು ಸಿಗುವುದೆ.

ಆರುತಿರುವ ದೀಪಕೆ
ಎಣ್ಣೆ ಸ್ಪರ್ಶ ಸಿಗುವುದೆ.
ಸಂಚು ಮಾಡಿ ಮಿಂಚು ಇಲ್ಲೇ
ಸನಿಹದಲ್ಲಿ ಮೂಡಬಹುದೆ….?

——————–[

ಲಲಿತಾ ಮು. ಹಿರೇಮಠ.

Leave a Reply

Back To Top