ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ದುಷ್ಠ ರಾಕ್ಷಸರು

ಮಣಿಪುರದ ಮಣ್ಣಿನಲ್ಲಿ
ರಕ್ಕಸರ
ಅಟ್ಟಹಾಸ,
ಮುಗ್ದ ಹೆಣ್ಣುಗಳ
ಮುಕ್ಕಿ ತಿನ್ನುವ
ಹದ್ದುಗಳ ಹಾರಾಟ,
ನಿಯಂತ್ರಿಸುವ
ಆಡಳಿತ,ಕಾನೂನು,ಪೋಲಿಸರ
ಮೌನದ ಸವಿಯೂಟ,
ಅಧಿಕಾರದ ಗದ್ದುಗೆಗೆ
ಬುಡಕಟ್ಟುಗಳ ಬುನಾದಿಯ
ಸಮಾಧಿ ಮಾಡುವ
ಕುರ್ಚಿಯಾಟ,
ಹೆಣ್ಣಿನ ಆರ್ತನಾದ
ಕೇಳಿಸುತ್ತಿಲ್ಲ,
ಕೇಳಿದರೂ
ಆಳುವ ದೊರೆಯ
ಮೌನ ವ್ರತದ
ಹುಡುಗಾಟ,
ನ್ಯಾಯಾಂಗದ ಕಣ್ಣಾಮುಚ್ಚಾಲೆ
ಬೆಳಕಿನಾಟ,
ಧಮನೀತರಿಗೆ
ಕೊನೆಗೂ ಸಿಗದು
ಯಾವುದೇ
ನ್ಯಾಯದ ಊಟ
ಬರೀ ನೋವಿನ
ಸಂಕಟ ….


ಕಾಡಜ್ಜಿ ಮಂಜುನಾಥ

About The Author

Leave a Reply

You cannot copy content of this page

Scroll to Top