ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಅಕ್ಕರೆಯಿಲ್ಲದ ಬದುಕನ್ನು ನಂಬಿ ಬಾಳುವುದು ಹೇಗೆ
ಒಡಲನ್ನೆ ಸುಡುವ ಯಾತನೆಯನ್ನು ಹೇಳುವುದು ಹೇಗೆ

ಸುಖವನ್ನು ಅರಸಿ ಹೊರಟವಳಿಗೆ ಸಿಕ್ಕಿದ್ದೇನು ಗೊತ್ತೇ
ಸುಖದ ಕಡಲಿನಲ್ಲಿ ದುಃಖವನ್ನು ಹೂಳುವುದು ಹೇಗೆ

ಮೋಡದ ಮರೆಯ ಚಂದ್ರನಂತೆ ಅದೃಷ್ಟ ಅಡಗಿತಲ್ಲ
ಮುಳುಗಿದ ಹಡಗಿನ ನಾವಿಕನಾಗಿ ಏಳುವುದು ಹೇಗೆ

ಕಪಟತನ ವಂಚನೆ ಮೋಸದಲಿ ಸಿಲುಕಿ ಹೋಗಬೇಡ
ಬುದ್ದನಂತೆಯೆ ತಾಳ್ಮೆಯಲಿ ಜಗವ ಆಳುವುದು ಹೇಗೆ

ಬಿಲದ ಮೂಷಿಕದಂತೆ ಹೊರಳೀತು ಜೀವನದ ಯಾನ
ಅಭಿನವನ ಸನ್ಮೀತ್ರರ ಕೂಟದಲಿ ಬೀಳುವುದು ಹೇಗೆ


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top