ಕಾಲ ಚಕ್ರ ಉರುಳುತ್ತಿದೆ-ಪ್ರೊ. ಸಿದ್ದು ಸಾವಳಸಂಗ,ತಾಜಪುರ

ಕಾವ್ಯ ಸಂಗಾತಿ

ಕಾಲ ಚಕ್ರ ಉರುಳುತ್ತಿದೆ

ಪ್ರೊ. ಸಿದ್ದು ಸಾವಳಸಂಗ,ತಾಜಪುರ

ಹಿರಿಯರೆಲ್ಲರೂ
ಹಿಂದೆ ಸರಿಯುತ್ತಿದ್ದಾರೆ !
ಕಿರಿಯರು ಇಲ್ಲ-ಸಲ್ಲದ
ಕಾರುಬಾರು ಮಾಡುತ್ತಿದ್ದಾರೆ !!

ಪ್ರಾಮಾಣಿಕರು
ಪತ್ತೆ ಇಲ್ಲದಾಗಿದ್ದಾರೆ !
ಬರೀ ಮೋಸಗಾರರು
ಮೆರೆಯುತ್ತಿದ್ದಾರೆ !!

ಹಳ್ಳಿಗಳು
ರಾಜಕೀಯ ಕೇಂದ್ರಗಳಾಗಿವೆ !
ದಿಲ್ಲಿಗಳು ದುಬಾರಿಯಾಗಿ
ಬದುಕು ದುಸ್ತರವಾಗಿದೆ !!

ಮಕ್ಕಳೆಲ್ಲರು
ಮೊಬೈಲ್ ಗಳಲ್ಲಿಯೇ ಮುಳುಗಿದ್ದಾರೆ !
ಹೆತ್ತವರು ದಿನವೂ
ಬರೀ ಜಗಳವಾಡುತ್ತಿದ್ದಾರೆ !!

ದಿನನಿತ್ಯದ
ವಸ್ತುಗಳು ಗಗನಕ್ಕೇರಿವೆ !
ಜೀವನ ಸಾಗಿಸಲಾರದೆ
ಅನೇಕ ಸಂಸಾರಗಳು ಬೀದಿಪಾಲಾಗುತ್ತಿವೆ !!

ಕಷ್ಟಪಡದೆ ಹಣಕ್ಕಾಗಿ
ಜನ ಹೆಣಗುತ್ತಿದ್ದಾರೆ !
ತಂದೆ-ತಾಯಿಗಳನ್ನು
ಸಾಕದೆ ಹೊರದೂಡುತ್ತಿದ್ದಾರೆ !!

ಕನ್ನಡ ಓದುಗರು
ಮರೆಯಾಗುತ್ತಿದ್ದಾರೆ !
ಎಲ್ಲ ಕಡೆ ಆಂಗ್ಲಶಾಲೆಗಳು
ರಾರಾಜಿಸುತ್ತಿವೆ !!

ಅನ್ನ ಬೆಳೆಯುವ ರೈತ
ಸತ್ತೇ ಹೋಗುತ್ತಿದ್ದಾನೆ !
ದಲ್ಲಾಳಿ ತನ್ನ
ಗಲ್ಲಾಪೆಟ್ಟಿಗೆ ತುಂಬಿಸಿಕೊಳ್ಳುತ್ತಿದ್ದಾನೆ !!

ಎಲ್ಲೆಡೆ ಸ್ವಾರ್ಥವೆ
ವಿಜೃಂಭಿಸುತ್ತಿದೆ !
ನಿಸ್ವಾರ್ಥ ನೀರಲ್ಲಿ
ಮುಳುಗಿ ಸತ್ತು ಹೋಗಿದೆ !!


ಪ್ರೊ. ಸಿದ್ದು ಸಾವಳಸಂಗ,ತಾಜಪುರ

Leave a Reply

Back To Top