ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

ಸಾಲುಮರದ ತಿಮ್ಮಕ್ಕ

ತಿಳಿಯಬೇಕು ಈ ದಿನ
ತಿಮ್ಮಕ್ಕ ಳ ಜನ್ಮ ದಿನ
ತುಮಕೂರ ತಾಲೂಕಿನ
ಹುಲಿಕಲ್ …..

ಕುರಿ ,ದನ, ಕೂಲಿ ಕೆಲಸ
ಬಿಕ್ಕಳ ಚಿಕ್ಕಯ್ಯ ನ ಒಡತಿ
ಕುದೂರು ಹುಲಿಕಲ್
ರಾಜ್ಯ ಹೆದ್ದಾರಿ…

ಹಸಿರು ಶಾಲಿನ ಮುಗಿಲು
ಮುಟ್ಟುವ ಅಂಬರ ಸ್ನೇಹಿ
ಮಕ್ಕಳು ಎಂಟು ಸಾವಿರ
ಭಾವ ತುಂಬಿ ಬೆಳೆದ ಸಸಿಗಳು ….

ಮುಳ್ಳು ಪೊದೆಗಳ ಹೊದಿಸಿ
ಕಾಲು ದಾರಿ ಸವೆಸಿ ನೀರುಣಿಸಿ
ಸಹನೆ ತಂಪು ಗಾಳಿ ಮೀಯ್ಯುತ್ತ
ಕಸಿ ಮಾಡಿ ಸಸಿ ನೆಟ್ಟ ಒಡತಿ …

ಸಾವಿರ ಸಾಲುಗಳ
ಮರಗಳ ತಾಯಾಗಿ
ಸಾಧನೆಯ ಸಾವಿರ
ಮುತ್ತುಗಳ ತಿಮ್ಮಕ್ಕ….

ಕೋಟಿ ಬೆಲೆಯ
ಒಡತಿಗಿಲ್ಲ ಕಾಸು
ಪಿಂಚಣಿ ಮೇಲೆ ಬದುಕು
ಪರಿಸರವೇ ಜೀವನ ಮೆಲಕು …

ಸನ್ಮಾನಕ್ಕಿಲ್ಲ ಕೊರತೆ
ಲಾಸ್ ಎಂಜಲೀಸ್
ಓಕ್ ಲ್ಯಾಂಡ್ ಕ್ಯಾಲಿಫೋರ್ನಿಯ
ನಾಮಾಂಕಿತ ಪುನಶ್ಚೇತನ ಕಾರ್ಯ….

ವಿಶ್ವಮಾತಾ ,ಕರ್ನಾಟಕ ಕಲ್ಪವಲ್ಲಿ ,
ಪದ್ಮಶ್ರೀ, ಭಾರತ ನಾಗರಿಕ
ಪೃಥ್ವಿ ಬಚಾವೋ
ಸಾಕು ಮಗನ ಅಪೇಕ್ಷೆ …


ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

Leave a Reply

Back To Top