ಕಾವ್ಯಯಾನ

ಒಳದನಿ

Sunil Abhiman Awachar: An inimitable voice in Dalit poetry and ...

                                                  

ಶಹನಾಜ್ ಬಿ. ಸಿರಿವ್ಯಾಲ

ಒಳದನಿ

ಅಂದು

ನೀನು ನೆಟ್ಟಿದ್ದ

ಜಾತ್ಯತೀತತೆಯ ವೃಕ್ಷ

ಇಂದು

ರಾಜಕೀಯ ವಿಷ ಗಾಳಿಗೆ ಸಿಲುಕಿ

ನಿತ್ಯವೂ ನರಳುತ್ತಿದೆ.

ನೀಲಿ , ಕೆಂಪು ಕ್ರಾಂತಿಗಳ ನಡುವೆಯೂ

ದಮನಿತರ ಕಣ್ಣುಗಳಲ್ಲಿ

ನೋವು ಮಡುಗಟ್ಟಿದೆ.

ಅದ್ಯಾಕೋ

ನಿನ್ನ  ಬುದ್ಧನಿಂದಲೂ

ಈ ಸಮಾಜವನ್ನು

ತಿದ್ದಲಾಗಲಿಲ್ಲ.

So You Think Rohith Vemula Was Dalit For Reservation Benefits?

ವೇಮುಲನ ಮುಖ

ಪ್ರತಿ ಬಾರಿ

ನೆನೆದಾಗಲೂ ,

ಎಲ್ಲೋ

ಬಾಪುವಿನ ನಾಡಲ್ಲಿ

ಕೃಶ ದೇಹಗಳಿಂದ

ರಕ್ತ ಒಸರಿದಾಗಲೂ ,

ಮತ್ತೆಲ್ಲೋ

ಅವಳ ತಿಂದುಂಡ

ದೇಹಕ್ಕೆ

ಬಲವಂತದ ಬೆಂಕಿ

ಹಚ್ಚಿದಾಗಲೂ ,

ನಿನ್ನ ಆಳೆತ್ತರದ

ಸದ್ಗ್ರಂಥವ  ಹಿಡಿದ

ದಾರಿ ತೋರುತ್ತಿರುವ

ಪ್ರತಿಮೆ

ಧುತ್ತೆಂದು

ಸ್ಮೃತಿಪಟಲದಲ್ಲಿ  ಮಿಂಚಿ ಮಾಯವಾಗುತ್ತದೆ.

ನೀ

ಮತ್ತೆ

ಹುಟ್ಟಿ ಬಾ

ಎಂದು ಹೇಳಲಾರೆ.

ನಿನ್ನ ಚಿಂತನೆಗಳು

ನಿನ್ನವರನ್ನ ಮಾತ್ರ ಆವರಿಸಿಲ್ಲ 

ಈ ಧರಣಿಯ

ಎಲ್ಲ ಶೋಷಿತರ 

ನೋವಿಗೆ ಮುಲಾಮಾಗಿವೆ.

ನವ ಸಮಾಜ

ಸಮ ಸಮಾಜ

ಕಟ್ಟುವ ಕನಸಿಗೆ 

ರಂಗು ಹಚ್ಚಿವೆ .

ಇದ್ಯಾಕೆ

‘ಈ’ ಜನ

ಹೀಗೆ

ಎಂದು ಪ್ರತಿ ಬಾರಿ ಕುಸಿದಾಗಲೂ

ಶಕ್ತಿ ಕೊಡುವ ಮಹಾ ಚೇತನವೇ

ನಿನಗೊಂದು ನನ್ನ ಸಲಾಮು.  

*************

Leave a Reply

Back To Top