ಸೌಮ್ಯ ಪ್ರಸಾದ್ ಕವಿತೆ-ನವೋದಯ

ಕಾವ್ಯ ಸಂಗಾತಿ

ನವೋದಯ

ಸೌಮ್ಯ ಪ್ರಸಾದ್

ಪಡುವಣ ಕಡಲೆಡೆ ಹೊರಟಿಹ ಭಾಸ್ಕರ
ಬಾನೊಳು ಕೆಂಪಿನ ರಂಗಿನ ಹಂದರ
ಪಕ್ಷಿಯು ಹಾರುವ ನೋಟವು ಸುಂದರ
ಮೋದದಿ ನಲಿದಿದೆ ಹೃದಯದ ಮಂದಿರ

ಅನುದಿನ ತರತರ ರೂಪದಿ ನಳಿಸುತ
ಸಕಲರ ಸೆಳೆದಿದೆ ಕಣ್ಮನ ತಣಿಸುತ
ಬಕಗಳು ತನ್ಮಯವಾಗಿವೆ ನೋಡುತ
ಸಲಿಲದಿ ನಿಂದಿವೆ ತಟಸ್ಥ ವಾಗುತ

ನಭದೊಳು ಮೂಡುವ ಚಿತ್ತಾರ ವಿಸ್ಮಯ
ಮನದೊಳು ನವ ಉಲ್ಲಾಸದ ಸಂಚಯ
ಅರ್ಕನಿಗೆ ಹೇಳುತಿಹರೆಲ್ಲರು ವಿದಾಯ
ತಮ ಕಳೆದೊಡೆ ನವ ಬೆಳಕಿನ ಉದಯ


ಸೌಮ್ಯ ಪ್ರಸಾದ್

Leave a Reply

Back To Top