ಕಾವ್ಯಯಾನ

ದಲಿತ ಚೇತನ

Dr Bhimrao Ambedkar brought Indias first Water Policy

ಮನುಶ್ರೀ ಸಿದ್ದಾಪುರ

ಓ ದಲಿತರ ಮಹಾಚೇತನವೇ
ಇಗೋ ನಿನಗೆನ್ನಯ ನಮನ
ಕಷ್ಟ-ಕಾರ್ಪಣ್ಯಗಳ ಬಳ್ಳಿಯಲಿ
ಅರಳಿ ನಗುವ ಚೆಲ್ಲಿದೆ ಗುಲಾಬಿ ಯಂತೆ.
ನರನಾಡಿಗಳ ಬತ್ತಿಯಾಗಿ
ತಾನುರಿದು ಸುತ್ತಲೂ
ಜ್ಞಾನದ ಬೆಳಕು ಹರಡಿದೆ.
ಶೋಷಿತರ ದನಿಗೆ ಮೂಕನಾಯಕನಾಗಿ
ಸೆಟೆದು ನಿಂತೆ ದೀನ ದಲಿತರ
ಬದುಕಿನ ಉದ್ದಾರಕೆ.
ಕಗ್ಗಲ್ಲಿನಲಿ ಮೂಡಿದೆ ಉಜ್ವಲ ಮೂರ್ತಿಯಾಗಿ
ಕೂಗಿ ಕರೆದು ತೋರಿಸಿದೆ
ಮಹಾಮನೆಯ ಬಿರುಕನು
ಶಿಕ್ಷಣ ಸಂಘಟನೆ ಹೋರಾಟದ
ತ್ರಿಪಟಿಕ ಸೂತ್ರ
ದಲಿತರ ಬದುಕಿನ ಪಾವನದಿ
ಸಾಗಿಬಂದ ಮಹಾಪಾತ್ರ.
ಹೊನ್ನ ಚರಿತೆಯ ಮಹಾಪುರುಷರಲಿ ನೀನಾದೆ
ಪುರುಷೋತ್ತಮ
ವಿಶ್ವವೇ ಸಾರಿದೆ ನೀ ಎಂದಿಗೂ
ಭಾರತಾಂಭೆಯ ಭಾರತರತ್ನ..

******

Leave a Reply

Back To Top