ಡಾ.ರೇಣುಕಾತಾಯಿ.ಸಂತಬಾ ರೇಮಾಸಂ-ಕರುನಾಡಿನ ಕೆಂಪಣ್ಣ

ಡಾ.ರೇಣುಕಾತಾಯಿ.ಸಂತಬಾ ರೇಮಾಸಂ

ಕರುನಾಡಿನ ಕೆಂಪಣ್ಣ

ಪ್ರಗತಿಯ ಪ್ರೇಮ ಪ್ರತಿಮೆ ನಮ್ಮ ಕೆಂಪಣ್ಣ
ಕೆಂಪನಂಜೇಗೌಡ ಲಿಂಗಾಂಬೆಯರ ಸುತ ಕೆಂಪಣ್ಣ
ಜಾತ್ಯತೀತ ಜಾಗಟೆ ಬಾರಿಸಿದವ ಕೆಂಪಣ್ಣ
ತ್ಯಾಗ ಬಲಿದಾನ ತೋರಿಸಿದವನೀತ ಕೆಂಪಣ್ಣll
ಲಾ ಲಾ ಲಾ ಲಾ ಲಾ ಲಾ ಲಾ
ನೋಡು ನೋಡು ಕಣ್ಣಾರೆ ವೀರ ಕೆಂಪಣ್ಣನ//

ಅರಸರ ಆಶೀರ್ವಾದ ಪಡೆದವ
ಗಿಡ್ಡೇಗೌಡನ ಗೆಳೆತನ ಬಯಸಿದವ
ಅಭಿವೃದ್ಧಿಯ ನಾದ ನುಡಿಸಿದವ
ಗುರಿ ಸಾಧಿಸಿ ಜಗಕೆ ತೋರಿಸಿದವನೀತ
ಲಾ ಲಾ ಲಾ ಲಾ ಲಾ ಲಾ ಲಾ
ನೋಡು ನೋಡು ಕಣ್ಣಾರೆ ವೀರ ಕೆಂಪಣ್ಣನ//

ನಾಡನೆಲ್ಲ ಸುತ್ತಿ ಮಾಯಾ ನಗರಿಯ ಕಟ್ಟಿ
ದಾಹ ತಣಿಸಲು ಕೆರೆಗಳ ಕಟ್ಟಿದ
ದೈವ ಪ್ರೀತಿ ಬಿತ್ತಲು ಗುಡಿ ಕಟ್ಟಿದ
ಕಸುಬಿಗೊಂದು ಪೇಟೆಯ ಕಟ್ಟಿದವನೀತ
ಲಾ ಲಾ ಲಾ ಲಾ ಲಾ ಲಾ ಲಾ
ನೋಡು ನೋಡು ಕಣ್ಣಾರೆ ವೀರ ಕೆಂಪಣ್ಣನ//

ಬೆರಗಿನ ಬೆಂಗಳೂರು ನಿರ್ಮಾಪಕ.
ಆದರ್ಶ ಚಿಂತಕ ನವ್ಯ ನಾಯಕ.
ಆಧುನಿಕ ವೈಚಾರಿಕ ವೈಜ್ಞಾನಿಕನವನೀತ
ಪ್ರಕೃತಿ ಮಾತೆಯ ಮರೆಯದ ಸೇವಕ ll
ಲಾ ಲಾ ಲಾ ಲಾ ಲಾ ಲಾ ಲಾ
ನೋಡು ನೋಡು ಕಣ್ಣಾರೆ ವೀರ ಕೆಂಪಣ್ಣನ//

——————————

Leave a Reply

Back To Top