ಅನುರಾಧಾ ರಾಜೀವ್ ಸುರತ್ಕಲ್-ಗಜಲ್

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಗಜಲ್

ಸೋಲಿಗೆ ಹೆದರಿ ಮೂಲೆಯ ಹಿಡಿದರೆ
ಬದುಕು ಕಟ್ಟಲಾಗದು ಗೆಳೆಯಾ
ಬೇಲಿಯ ಒಳಗೆ ಮುದುಡಿ ಕುಳಿತರೆ
ಭಯವ ಅಟ್ಟಲಾಗದು ಗೆಳೆಯಾ

ಗೆಲುವ ದಾರಿಯ ನೋಡುತ ಹೆಜ್ಜೆಯ
ಇಡಬೇಕಲ್ಲವೇ ಮುಂದಕೆ
ಕಲ್ಲು ಮುಳ್ಳೆಂದು ಹಿಂದಕೆ ಸರಿದರೆ
ಗಮ್ಯವ ಮುಟ್ಟಲಾಗದು ಗೆಳೆಯಾ

ಹೃದಯದ ಮಾತನು ಕೇಳಿ ನಿರ್ಧಾರವ
ಕೈಗೊಳ್ಳಬೇಕು
ಕ್ರೋಧದ ಭಾವವು ಮನವ ಸುಡುತಿರೆ
ಎದೆಯ ತಟ್ಟಲಾಗದು ಗೆಳೆಯಾ

ದೃಢ ಚಿತ್ತದಿ ಯೋಚಿಸಿ ಯೋಜನೆಯ
ರೂಪಿ‌ಸಿ ನಡೆಯಬೇಕು
ಬೇಡದ ಜೀವನದಿಂದ ದೂರವಾದರೆ
ಮರಳಿ ಹುಟ್ಟಲಾಗದು ಗೆಳೆಯಾ

ಹಲವು ಸವಿಗನಸನು ಹೊತ್ತು ಸುಂದರ
ಬಾಳಿನ ನಿರೀಕ್ಷೆ ರಾಧೆಯಲಿ
ಬಲವು ತುಂಬಿದೆ ಬಂಧಗಳ ಹೊಸ್ತಿಲಿರೆ
ಸ್ಥೈರ್ಯವ ಮೆಟ್ಟಲಾಗದು ಗೆಳೆಯಾ


ಅನುರಾಧಾ ರಾಜೀವ್ ಸುರತ್ಕಲ್

2 thoughts on “ಅನುರಾಧಾ ರಾಜೀವ್ ಸುರತ್ಕಲ್-ಗಜಲ್

Leave a Reply

Back To Top