ಎ.ಎನ್.ರಮೇಶ್. ಗುಬ್ಬಿ. ಕವಿತೆ- ಉತ್ತರ

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ಉತ್ತರ

ಉತ್ತರ..!

ಕಡಲ ಕೇಳಿದೆ..
“ಹೇಳು.. ನಿನ್ನೊಡಲ
ಜಲವೇಕೆ ಉಪ್ಪುಪ್ಪು..??”

ಕಡಲು ನುಡಿಯಿತು..
“ಸಾವಿರ ನದಿಗಳು
ಧರೆಯ ದುಃಖ-
ದುಮ್ಮಾನಗಳನೆಲ್ಲ
ಬಳಿದು ತಂದು
ತುಂಬಿಸುತಿವೆ……
ನಿತ್ಯ ನನ್ನೊಡಲು.!

ಹಾಗಾಗಿ ಗೆಳೆಯ
ನನ್ನೊಡಲ ತುಂಬ
ತುಂಬಿರುವುದು
ನೀರಲ್ಲ.. ಅದು….
ಜಗದ ಕಂಬನಿ..!!”


ಎ.ಎನ್.ರಮೇಶ್. ಗುಬ್ಬಿ.

One thought on “ಎ.ಎನ್.ರಮೇಶ್. ಗುಬ್ಬಿ. ಕವಿತೆ- ಉತ್ತರ

Leave a Reply

Back To Top