ಸುಧಾ ಪಾಟೀಲ್ ಕವಿತೆ-ಕಣ್ಣುಮುಚ್ಚಾಲೆ

ಕಾವ್ಯ ಸಂಗಾತಿ

ಸುಧಾ ಪಾಟೀಲ್

ಕಣ್ಣುಮುಚ್ಚಾಲೆ

ವರುಣನ ಆಗಮನದಿ
ನೇ ನೆನಪಾದೆ
ಕಚುಗುಳಿಯಿಡುತಾ
ಮನದಲಿ ನಿಂದೆ

ಏನೋ ಹೇಳಲು
ಕಣ್ಣೆತ್ತಿ ನೋಡಿದಾಗ
ತೆರೆದ ಆಲಿಂಗನದಿ
ನನ್ನಪ್ಪಲು ಕಾದು
ನಿಂತಿದ್ದೆ

ಒಳಿತೋ ಕೆಡಕೋ
ನಾ ಅರಿಯೆ
ಈ ನಿನ್ನ ಸಂಗ
ಏನೂ ಅರಿಯದೆ
ನಾ ಒಪ್ಪಿಕೊಂಡೆ

ಕಣ್ಣು ಮುಚ್ಚಾಲೆ
ಆಡುತ ಕಳೆಯಬೇಡ ಕಾಲ
ಹೇಳಲಾರದೆ ಹೋಗಬೇಡ
ನಿನ್ನ ಮನದಿಂಗಿತವ

ಕಾದೆ ಇಷ್ಟು ದಿನ
ಪ್ರೀತಿಯ ಪಯಣಿಗನಿಗೆ
ಕೂಡಿ ಪಯಣಿಸಲು
ಈ ಜೀವನವೆಂಬ
ಉಯ್ಯಾಲೆಯಲ್ಲಿ


ಸುಧಾ ಪಾಟೀಲ್

Leave a Reply

Back To Top