ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ನಗುವ ಮನದಲ್ಲಿ ಹೇಳದ ನೋವುಗಳು ಅದೇಷ್ಟೋ
ನೊಂದ ಹೃದಯದಲ್ಲಿ ಬೆಂದ ಭಾವಗಳು ಅದೇಷ್ಟೋ

ಮನುಜ ಜನ್ಮಕೆ ಕಷ್ಟಸುಖಗಳು ಹಗಲು ಇರುಳಾಗಿವೆ
ಮೃದುಜೀವದಲಿ ಕಮರಿದ ಆಸೆಗಳು ಅದೇಷ್ಟೋ

ಅಕ್ಷಿಯೊಳು ಇಳಿವ ದೃಗುಜಲ ಬತ್ತಿ ಹೋಯಿತೆ
ಅಡಿಗಡಿಗೆ ತುಳಿದ ಕಲ್ಲು ಮುಳ್ಳುಗಳು ಅದೇಷ್ಟೋ

ವಹ್ನಿಯ ಪರ್ವತ ಎದೆಯೊಳುರಿದು ಭಸ್ಮವಾಯಿತೇ
ವಿಘ್ನವ ಎದುರಿಸುತ ಸಾಗಿದ ದಿನಗಳು ಅದೇಷ್ಟೋ

ಬಡತನದ ಕುಲುಮೆಯ ಕಬ್ಬಿಣವು ಅಭಿನವನ ಕಾವ್ಯ
ಮೃಡಹರನ ನೆನೆಸಿ ಬದುಕಿದ ಕ್ಷಣಗಳು ಅದೇಷ್ಟೋ


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top