ರೇಖಾ ಸುದೇಶ್ ರಾವ್ ಕವಿತೆ-ಹೃದಯ ವೈಶಾಲ್ಯ

ಕಾವ್ಯ ಸಂಗಾತಿ

ರೇಖಾ ಸುದೇಶ್ ರಾವ್

ಹೃದಯ ವೈಶಾಲ್ಯ

ಹೃದಯದೊಳು ತುಂಬಿರಲಿ ಸ್ನೇಹ ಭಾವ
ಸಕಾರಾತ್ಮಕ ಚಿಂತನೆ ಮನುಜ ಸ್ವಭಾವ
ನಕಾರಾತ್ಮಕ ವಿಚಾರ ದೂರ ಸರಿಸು ಮಾನವ
ಸದ್ಭಾವನೆ ತುಂಬಿರಲಿ ದೇವನೊಬ್ಬ ಕಾಯುವ

ಮಾನವೀಯತೆ ಸೃಷ್ಟಿಕರ್ತನಿಗೆ ಬಲು ಇಷ್ಟ
ಜಗದೊಳು ಯಾರನ್ನೂ ಕಾಣದಿರು ಕನಿಷ್ಟ
ಭಾವೈಕ್ಯತೆಯೆ ನಮ್ಮೆಲ್ಲರ ಬದುಕಿಗೆ ಶ್ರೇಷ್ಠ
ಸಂತೃಪ್ತ ಭಾವ ಹೊಂದು ಮನಕೆ ಬಾರದು ಕಷ್ಟ

ಸಮಾಜ ಸುಧಾರಣೆಯಲ್ಲಿ ನಿಸ್ವಾರ್ಥ ಸೇವೆಯಿರಲಿ
ಭೇಧ ಭಾವ ತೊರೆದು ಜೀವನ ಸಾಗಲಿ
ನಿಷ್ಕಲ್ಮಶ ಆಶಾ ವಾದಿ ಸಹೃದಯರಾಗಲಿ
ಜನ ಹಿತ ಕಾರ್ಯಗಳಿಗೆ ಮನ ಮುಂದಾಳುತ್ವ ವಹಿಸಲಿ


Leave a Reply

Back To Top