ಶಂಕರಾನಂದ ಹೆಬ್ಬಾಳ-ಮತ್ಲಾ ಗಝಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಮತ್ಲಾ ಗಝಲ್

ಕರುಣೆ ಇರದವರ ಮುಂದೆ ಪ್ರೇಮವನು
ಅರುಹುದೆಂತು
ಸ್ವರವ ಪಾಡದವರ ಮುಂದೆ ರಾಗವನು
ಹಾಡುವುದೆಂತು

ಕೋಪದಿ ಕೊಲ್ಲುವರ ಮುಂದೆ ಪ್ರಾಣವನು
ಕೇಳುವುದೆಂತು
ಕೂಪದಿ ತಳ್ಳುವವರ ಮುಂದೆ ಮೌನವನು
ತಾಳುವುದೆಂತು

ಸಿಡಿಲಂತೆ ಸಿಡಿಯುವರ ಮುಂದೆ ನಗುವನು
ಬೇಡುವುದೆಂತು
ಕಡಲಾಗಿ ಉಕ್ಕುವವರ ಮುಂದೆ ಶಾಂತಿಯನು
ಪಡೆವುದೆಂತು

ಮಿತ್ರತ್ವ ತಿಳಿಯದವರ ಮುಂದೆ ನೇಹವನು
ಕೋರುವುದೆಂತು
ಭಾತೃತ್ವ ಅರಿಯದವರ ಮುಂದೆ ಭಾವವನು
ಬೆಸೆಯುವದೆಂತು

ಅಭಿನವನ ಬೆರೆಯದವರ ಮುಂದೆ ಕಾವ್ಯವನು
ಓದುವುದೆಂತು
ಶುಭವ ನುಡಿಯದವರ ಮುಂದೆ ತೋಷವನು ಹಂಚುವುದೆಂತು


ಶಂಕರಾನಂದ ಹೆಬ್ಬಾಳ

Leave a Reply

Back To Top