ವಾಣಿ ಯಡಹಳ್ಳಿಮಠ ಕವಿತೆ- ಹೇಳು

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಹೇಳು

ಕಣ್ತುಂಬಿದ ಕನಸುಗಳೇ ಕಣ್ ಚುಚ್ಚಿ
ಯಾರನು ಅಳಿಸಿಲ್ಲ ಹೇಳು?
ಹಗುರಾಗಿಸುವ ಭಾವನೆಗಳೇ ಒಮ್ಮೊಮ್ಮೆ
ಯಾರಿಗೆ ಹೊರೆಯೆನಿಸಿಲ್ಲ ಹೇಳು?

ಚಿಕ್ಕಂದಿನಿಂದಲೂ ಬರೀ
ಚೊಕ್ಕ ಬದುಕಿನ ಆಸೆಯೇ ನಿನಗೆ
ಆಕಾಂಕ್ಷೆಗಳ ಆಕಾಶವೇ ಕಳಚಿದಾಗ
ಯಾರ ಮನಸ್ಸು ಸತ್ತಿಲ್ಲ ಹೇಳು?

ಎಲ್ಲರೂ ನಂಬಿಕೆಗೆ ಅರ್ಹರಲ್ಲವೆಂಬುದು
ಸತ್ಯವೇ ಸರಿ
ಆದರೂ ನನ್ನವರೆಂದು ನಂಬಿ
ಯಾರು ನೊಂದಿಲ್ಲ ಹೇಳು?

ಬದುಕ ಪುಸ್ತಕವು ಸ್ಪುಟವಾಗಿ
ಬರೆದಾಗಿದೆ ಮರುಳೇ
ಹೊಸಪುಟವ ಸೇರಿಸಲು ಹೋಗಿ
ಯಾರು ಹತಾಶರಾಗಿಲ್ಲ ಹೇಳು?


Leave a Reply

Back To Top