ಸುಜಾತ ಮಂಜುನಾಥ್ ಕವಿತೆ-ಪುಸ್ತಕ

ಕಾವ್ಯ ಸಂಗಾತಿ

ಸುಜಾತ ಮಂಜುನಾಥ್

ಪುಸ್ತಕ

ಮಾತಾಡುತ್ತಿವೆ ಪುಸ್ತಕಗಳು ಅಕ್ಷರದಲಿ
ಜಗತ್ತು ಜಾಹಿರಾತುಗಳ ಮಾಹಿತಿ ಕುರಿತು
ಮುಂದಿನ ಭವಿಷ್ಯದ ಕ್ಷಣವನ್ನು ಅರಿತು
ಇತಿಹಾಸ ಯುಗದ ಬಗೆಬಗೆಯ ಕುರಿತು
ಸೋಲು ಗೆಲುವಿನ ಸಮಸ್ಯೆಯ ಅರಿತು
ಒಳಿತು ಕೆಡುಕುಗಳ ವಿಷಯದ ಕುರಿತು

ಹೂ ದುಂಬಿಗಳ ಒಲವಿದೆ ಪುಸ್ತಕದಲಿ
ಹಕ್ಕಿಪಕ್ಷಿಗಳ ಗಾನ ಲಹರಿ ಇದೆ ಪುಸ್ತಕದಲಿ
ಹಸಿರುಟ್ಟ ಹೊಲಗದ್ದೆ ಹುಟ್ಟಿದೆ ಪುಸ್ತಕದಲಿ
ನದಿ ಝರಿಯ ಜುಳು ಜುಳು ತುಂಬಿದೆ ಪುಸ್ತಕದಲಿ
ಶಿಲ್ಪಕಲೆಯ ರಸದೌತಣವು ಪುಸ್ತಕದಲಿ
ಸಾಧುಸಂತರ ಸಾಧನೆಯ ಮೌಲ್ಯಗಳು ಪುಸ್ತಕದಲಿ

ಅಡಗಿದೆ ಜ್ಞಾನ ಭಂಡಾರದ ನಿಧಿ ಪುಸ್ತಕದಲಿ
ಜ್ಞಾನಿಗಳಿಗೆ ಝೇಂಕಾರದ ಧ್ವನಿ ಸಂಕ್ಷಿಪ್ತದಲಿ
ನುಡಿಯುತ್ತಿವೆ ಪ್ರತಿಘಳಿಗೆಯು ವೇದದ ನುಡಿ
ಬಯಸುತ್ತಿವೆ ಇರಲು ಮಿತ್ರನಂತೆ ನಮ್ಮೊಂದಿಗೆ ದಿನವಿಡಿ
ಜ್ಞಾನವಿಜ್ಞಾನದ ಅಪರೂಪದ ಮಾಹಿತಿಯಡಿ
ನೀ ತಿಳಿಯಾಯ್ಯ ಪುಸ್ತಕದಲ್ಲಿ ಸವಿಸ್ತಾರದಡಿ


ಸುಜಾತ ಮಂಜುನಾಥ್

Leave a Reply

Back To Top