ಡಾ ಸಾವಿತ್ರಿ ಮ ಕಮಲಾಪೂರ ಕವಿತೆ-ಕುಟುಂಬ ಒಂದೇ ಭಾರತ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಮ ಕಮಲಾಪೂರ

ಕುಟುಂಬ ಒಂದೇ ಭಾರತ

ಮನುಜ ಮತ ವಿಶ್ವ ಪಥ
ಸಾರಿದಂಥ ಭಾರತ
ವಿಶ್ವ ಮಾನವ ಸಂದೇಶ
ಸಾರಿದ ಆಗು ನೀ ಅನಿಕೇತನ
ಕೂಟ ಒಂದೇ ನಮ್ಮ ಕುಟುಂಬ
ಹಿರಿಯರೊಬ್ಬರು ತಂದೆ ಎಮಗೆ
ಬುದ್ಧಿ ಹೇಳುತ ಮುಂದೆ ನಡೆಸುತ
ಒಲವು ಪ್ರೀತಿಗಿಲ್ಲ ಕೊರತೆಯು
ಅಪ್ಪಿ ಒಪ್ಪಿ ನಡೆದ ತಾಯಿಯು
ಬಂಧು ಬನ್ನಿ ಬಳಗ ಬನ್ನಿ
ಬುದ್ಧಿಯಿಂದ ಎದ್ದು ನಿಲ್ಲಿ
ಸತ್ಯ ಸಮತೆ ಸಾರುತ
ಎಲ್ಲರೊಳಗೆ ಬೆರೆಯುತ
ಸಾಗಿ ಮುಂದೆ ಸಾಗಿ ಎಂದು
ಸಾರಿ ಹೇಳುವ ಎಮ್ಮ ಕೂಟ
ಅಕ್ಕಳಾಗಿ ಬೈದುದುಂಟು
ತಂಗಿಯಾಗಿ ಕಾಡಿದ್ದುಂಟು
ಶಿಷ್ಯ ಳಾಗಿ ಕಲಿತುದುಂಟು
ಎಂಥ ಮಧುರ ನಂಟು
ಬೆಸೆದುಕೊಂಡ ಅಂಟು
ಎಲ್ಲರೊಳಗೆ ನಾನೂ ಕೂಡಿ .
ತುಂಬು ಕುಟುಂಬ ಎಂದು ತಿಳಿದು
ಬರುವೆ ಇಲ್ಲಿಗೆ ಬೈದರೂ ….


ಡಾ ಸಾವಿತ್ರಿ ಮ ಕಮಲಾಪೂರ

Leave a Reply

Back To Top