ಕಾವ್ಯ ಸಂಗಾತಿ
ಲಲಿತಾ ಕ್ಯಾಸನ್ನವರ.
ಸಾವಿನ ತೇರಿನಲ್ಲಿ ಮೆರವಣಿಗೆ
ಸಾವಿನ ತೇರಿನಲ್ಲಿ ಮೆರವಣಿಗೆ
ಹೊರಟಿರುವೆ ಸಾಂತ್ವನ ನೀಡಬಲ್ಲಿರಾ
ಇರುವವರೆಗೆ ಜಯಿಸಬೇಕು ಅಷ್ಟೇ
ಅವರಿಗಾಗಿ ಇವರಿಗಾಗಿ ನಾನು
ಜೀವನದ ತೇರಿನ ಗಾಲಿಗೆ
ಎಣ್ಣೆಯ ಹಾಕುತ್ತಾಜಂಗುಹಿಡಿಯದಂತೆ
ಮಾಡಿದ ಸೇವೆ ಮಿಡಿದ ಹೃದಯಗಳು
ನನ್ನ ಮಡಿಲ ಕುಡಿಗಳು ರಕ್ತ ಸಂಬಂಧಿ
ನೆರೆ ಹೊರೆ ಎಲ್ಲರ ನೆನಪು ಕಣ್ಣು ಕಟ್ಟುತ್ತೆ
ಸೂರ್ಯನ ಅಸ್ತಂಗತ ಛಾಯೆಯೊಂದಿಗೆ /ಮೆರವಣಿಗೆ
ಎಲ್ಲರಿಗೂ ಒಂದೇ ಪ್ರಶ್ನೆ ನೀನೆನು ಮಾಡಿದೆ..
ಅವರಿಗೇನು ಗೊತ್ತು ನಾನು ಮಾರಿಕೊಂಡ
ಎಲ್ಲರಿಗಾಗಿ ಕಳೆದುಕೊಂಡ ನನ್ನತನ ಹುಡುಕುತಿರುವೆನೆಂದು ಪ್ರತಿಘಳಿಗೆ/ಮೆರವಣಿಗೆ
ಎಲ್ಲರಿಗೂ ಗೊತ್ತು ನಾನೇನು ಮಾಡಿದೆನೆಂದು
ಆದರೆ ವಾಸ್ತವದ ಅರಿವಿರದ ಭಂಡರು
ಒಪ್ಪಿಕೊಳ್ಳಲು ಅಶಕ್ತ ಷಂಡರಿವರು
ನಿಸ್ವಾರ್ಥತತೆಗೆ ನಾನಾರ್ಥ ಕಲ್ಪಿಸುವ ಮೂಢರಿವರು/ಮೆರವಣಿಗೆ
ಕೊನೆಯ ದಿನ ನನ್ನದು ಎಂದು ತಿಳಿದಾಗ
ಅಲ್ಲಿ ಅವರು ಇವ್ರು ಯಾರೂ ಇಲ್ಲ ನಾನೇ
ಏರಬೇಕು ತೇರಿನಲ್ಲಿ ಮೆರವಣಿಗೆ ಹೋಗಬೇಕು
ಸಾಲಿನಲ್ಲಿ ಸ್ವಾರ್ಥಿಗಳ ಮುಂದಾಳತ್ವದಲ್ಲಿ
ಜೀವನದ ತೇರಿಗೆ ಅದ್ದೂರಿ ಮೆರವಣಿಗೆಸಲ್ಲ
ಇದ್ದಾಗಲೇ ಒಂದು ರೊಟ್ಟಿ ಹಿಡಿ ಅನ್ನ ನೀಡಿ
ಸತ್ತ ನಂತರದ ಪಣಿವಾರ ಕಾಗೆಗಳ ಪಾಲು
ಮರೆಯದಿರಿ ನಿಮ್ಮತನ ಮೆರವಣಿಗೆ ಹೋಗಬೇಕು ಎಲ್ಲಾರೂ ಒಂದಲ್ಲ ಒಂದು ದಿನ….
————————————-
ಲಲಿತಾ ಕ್ಯಾಸನ್ನವರ.
ಅರ್ಥಗರ್ಬಿತ ಸಾಲುಗಳು