ಕಾಡಜ್ಜಿ ಮಂಜುನಾಥ ಕವಿತೆ-ಫಲಿತಾಂಶ”

ಕಾವ್ಯಸಂಗಾತಿ

ಕಾಡಜ್ಜಿ ಮಂಜುನಾಥ

ಫಲಿತಾಂಶ

ಮಾತಿನ ಮಂಟಪ ಕಟ್ಟಿ
ಭರವಸೆಗಳ ಗೋಪುರ ಕುಟ್ಟಿ
ಹಣದ ಮಳೆಯ ,
ಮದ್ಯದ ಹೊಳೆಯ
ಕರುನಾಡಲಿ ಮೌನದಿ ಹರಿಸಿ;
ಎದುರಾಳಿಗೆ ಜಾತೀಯ
ಕತ್ತಿಯ ತೋರಿಸಿ,
ಧರ್ಮದ ನಶೆಯನು
ನರರಿಗೆ ಏರಿಸಿ;
ಉಚಿತವೆಂಬ ಸ್ವರ್ಗದ ಬಾವಿಗೆ
ಹಗಲಲ್ಲೇ ಬೀಳಿಸಿ;
ಮತದಾರರ ಮನದಿ ಗೊಂದಲಗಳ
ಸರಮಾಲೆಯ ಮೂಡಿಸಿ;
ಆಸೆಯ ಅರಮನೆಯ ಕಟ್ಟುವೆವೆಂದು
ನಯವಂಚಿಸಿ;
ಮಾನವೀಯತೆಯ ಮಣ್ಣುಪಾಲು
ಮಾಡಿ;
ಜನರ ಎದೆಯಲಿ ದ್ವೇಷದ ಬೆಂಕಿಯ
ಅಂಟಿಸಿ;
ಕುರ್ಚಿಯ ಮೋಹದಲಿ
ಸಂಚು ಹೂಡಿ, ಹೊಂಚುಹಾಕಿ
ರಾಜಕೀಯದ;


ಪಟ್ಟುಗಳ ಕುಲುಮೆಯಲಿ ಕಾಯಿಸಿದ ಕಬ್ಬಿಣದಂತೆ,
ಅಧಿಕಾರವ ಹಿಡಿಯಲು,
ಹಸಿರು ಬಾವುಟದ
ಆಗಮನಕ್ಕೆ
ಜಾತಕ ಪಕ್ಷಿಯಂತೆ
ಕಾಯುತಿವೆ;
ಕರುಣೆಯಿಲ್ಲದ
ಎದೆಗಳು
ಅಧಿಕಾರದ ನರಿಗಳು!!!


ಕಾಡಜ್ಜಿ ಮಂಜುನಾಥ

Leave a Reply

Back To Top