ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ತಡೆಯದಿರು

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ

ತಡೆಯದಿರು

ಗೆಳತಿ
ತಡೆಯದಿರು ನನ್ನನ್ನು
ನಿನ್ನ ಹೃದಯದಲಿ
ಹೊಕ್ಕು ನನ್ನ ಹುಡುಕಲು

ತಡೆಯದಿರು ನನ್ನನ್ನು
ನಿನ್ನ ಮನದಾಳದಲ್ಲಿ
ಇಳಿದು ನಿನ್ನ ನೆನಪುಗಳ
ಶಬ್ದ ಅಕ್ಷರಕೆ ಜೀವ ತುಂಬಲು

ತಡೆಯದಿರು ಚೆಲುವೆ
ನಿನ್ನಂಗಳದಲಿ ನಾನು
ನೆಟ್ಟ ಮಾವಿನ ಮರಕೆ
ಪ್ರೀತಿಯ ನೀರೆರೆಯಲು

ತಡೆಯದಿರು ಸಖಿ
ನೀ ಕಂಡ ಕನಸುಗಳಿಗೆ
ಭದ್ರ ಕೋಟೆ ವಿಹಾರ
ಕಟ್ಟಿ ಕೊಡಲು

ತಡೆಯದಿರು ಗೆಳತಿ
ಹಸಿರು ಹುಲ್ಲಿನ ಮೇಲೆ
ಪೊದರಿನ ಕೋಗಿಲೆಗೆ ಮಧುರ
ಭಾವ ಮನ ಬಿಚ್ಚಿ ಹಾಡಲು

ತಡೆಯದಿರು ನನ್ನನ್ನು
ನಿನ್ನ ಜೊತೆಗೆ ಹೆಜ್ಜೆ ಹಾಕಿ
ಜೀವ ಪಯಣಕೆ

ಮುಕ್ತಿ ಕಾಣಲು


ಡಾ ಶಶಿಕಾಂತ ಪಟ್ಟಣ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ, ಶ್ರೇಷ್ಠ ಔಷಧ ವಿಜ್ಞಾನಿ
35 ಕೃತಿಗಳು ಪ್ರಕಟ
13 ಕವನ ಸಂಕಲನ ಲೋಕಾರ್ಪಣೆ
ಗಾಂಧಿಗೊಂದು ಪತ್ರ ಇದಕ್ಕೆ ರಾಷ್ಟ್ರೀಯ ಡಾ ಡಿ ಎಸ್ ಕರ್ಕಿ ಸಾಹಿತ್ಯ ಪ್ರತಿಷ್ಟಾನದ ಸಾಹಿತ್ಯ ಪ್ರಶಸ್ತಿ 2022
ಡಾ ಎಂ ಎಂ ಕಲಬುರ್ಗಿ ಸಮಗ್ರ ಸಾಹಿತ್ಯ ಪ್ರಶಸ್ತಿ 2023 ಜನೆ

Leave a Reply

Back To Top