ಕಾವ್ಯ ಸಂಗಾತಿ
ಬುದ್ಧ ಬಂದ
ಡಾ ಅನ್ನಪೂರ್ಣ ಹಿರೇಮಠ
ಬುದ್ಧ ಬಂದ ಜಗಕೆ ಬೆಳಕು ಚೆಲ್ಲಲು
ಶಾಂತಿ ಮಂತ್ರ ಪಠಿಸಿ ನೆಮ್ಮದಿಯ ನೀಡಲು//ಪ//
ಆಸೆಯಿಂದ ದುಃಖ ನಿಮ್ಮನಗಲದೆಂದನು
ಬಳಲಿಕೆಯು ನಮಗೆ ನೋವ ಕೊಡದಿರದು
ಕೂಡಿಟ್ಟ ಸಂಪತ್ತು ಭಯ ಬಿಡಿಸದೆಂದನು
ಭೋಗ ಲಾಲಸೆಗಳಿಂದ ಭವಣೆ ತಪ್ಪದೆಂದನು//
ವರ್ಗ ವರ್ಣ ಜಾತಿ ಮತ ಬೇಡವೆಂದನು
ರೋಗ ರುಜಿನ ಮರಣದಂಜಿಕೆ ಬಿಡಿರೆಂದನು
ಜ್ಞಾನದಾಹದಿ ಬಳಲದೆ ಇರಬೇಡಿರೆಂದನು
ಧರ್ಮ ಸಮನ್ವಯತೆಯ ಮರಿಬೇಡಿರೆಂದನು//
ಜನರ ಹಿತ ಜಗದ ಹಿತ ಮನದ ಹಿತವಾಗಲಿ
ಮನಶ್ಶಾಂತಿ ಪಡೆದು ಎಲ್ಲ ಬದುಕುವಂತಾಗಲಿ
ಸತ್ಚಿಂತನೆ ಸದಾಚಾರ ಸಮನ್ವಯತೆ ನಂಬಿಕೆಯಿರಲಿ
ಪಾವಿತ್ರ್ಛತೆಯೇ ಜೀವನದ ಆಧಾರವಾಗಲಿ //
ಅರುಹಿನ ದಾರಿ ತುಳಿದು ಮಹಾಪುರುಷನಾದ
ತೋರಿ ಎಲ್ಲರಿಗೂ ಸನ್ಮಾರ್ಗವನು ಸಂತನಾದ
ಮಡದಿಮಗು ಎಲ್ಲ ತ್ಯಜಿಸಿ ಲೋಕದಿ ವಿರಕ್ತನಾದ
ಅಹಿಂಸಾ ತತ್ವ ಸಾರಿ ಜಗದಿ ಸತ್ಯವಂತನಾದ//
ತಪವಗೈದು ಎಲ್ಲ ಗೆದ್ದು ಬುದ್ಧನಾದ
ಸರಳ ಉಪದೇಶ ಸಾರಿ ಸಿದ್ಧನಾದ
ದುಃಖದಿಂದ ಮುಕ್ತರಾಗೊ ಮಾರ್ಗತೋರಿದ
ಆಸೆಯೇ ದುಃಖಕ್ಕೆ ಮೂಲವೆಂದು ಪರಿತ್ಯಾಗಿಯಾದ//
ಡಾ ಅನ್ನಪೂರ್ಣ ಹಿರೇಮಠ
Very nice and meaningful words that itself will give pleasure to the mind that means your wordings